Advertisement

ಹಾವು ಮತ್ತು ನಾವು : ಉರಗ ಮಾಹಿತಿ ಕಾರ್ಯಕ್ರಮ

02:25 AM Jul 12, 2017 | Harsha Rao |

ಶಿರ್ವ:  ಸೌತ್‌ ಕೆನರಾ ಫೋಟೋಗ್ರಾಫರ್ ಎಸೋಸಿಯೇಶನ್‌ (ರಿ) ಕಾಪು ವಲಯದ ರಜತ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ಉರಗ ತಜ್ಞ ಗುರುರಾಜ ಸನಿಲ್‌ ಅವರಿಂದ ಹಾವು ಮತ್ತು ನಾವು ಉರಗ ಮಾಹಿತಿ ಕಾರ್ಯಕ್ರಮವು ಜು. 8 ರಂದು ಪಡುಬೆಳ್ಳೆ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.

Advertisement

ಸಮಾರಂಭದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಲಾಡಳಿತ ಮಂಡಳಿಯ ಸ್ಥಳೀಯ ಸಮಿತಿಯ ಅಧ್ಯಕ್ಷ ಶಿವಾಜಿ ಸುವರ್ಣ ಮಾತನಾಡಿ ಪ್ರಕೃತಿಯಲ್ಲಿರುವ ನಾನಾ ಜಾತಿಯ ಹಾವುಗಳು ಪರಿಸರ ಸೇ°ಹಿಯಾಗಿದ್ದು  ಪ್ರಕೃತಿಯ ಸಮತೋಲನ ಕಾಯ್ದುಕೊಂಡು ಬರಲು ಸಹಕಾರಿಯಾಗಿವೆ.ಈ ನಿಟ್ಟಿನಲ್ಲಿ ಉರಗ ತಜ್ಞ ಗುರುರಾಜ ಸನಿಲ್‌ ಅವರ ಹಾವುಗಳ ಬಗ್ಗೆ ಕಾಳಜಿ ಶ್ಲಾಘನೀಯವಾಗಿದ್ದು, ಅವರು ಉರಗಗಳ ಬಗ್ಗೆ ಬರೆದ ಕೃತಿಯು ಮಂಗಳೂರು ವಿ.ವಿ.ಯ ಪಠ್ಯಪುಸ್ತಕದಲ್ಲಿ ಪಠ್ಯವಾಗಿ ಸೇರ್ಪಡೆಗೊಂಡಿರುವುದು ಅವರ ಪರಿಶ್ರಮಕ್ಕೆ ಸಂದ ಗೌರವವಾಗಿದೆ ಎಂದು ಹೇಳಿದರು.

ಗುರುರಾಜ ಸನಿಲ್‌ ಅವರು ಜೀವಂತ ಹಾವುಗಳನ್ನು ಹಿಡಿದು ಪ್ರಾತ್ಯಕ್ಷಿಕೆ ಮೂಲಕ ಅವುಗಳ ಆಹಾರ ಕ್ರಮ, ಜೀವನ ಶೈಲಿ ಮತ್ತು ಹಾವು ಕಡಿತಕ್ಕೆ ಪ್ರಥಮ ಚಿಕಿತ್ಸೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ನಾರಾಯಣ ಗುರು ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಉಷಾ,ಎಸ್‌ಕೆಪಿಎ ಕಾಪು ವಲಯದ ಕಾರ್ಯದರ್ಶಿ ವೀರೇಂದ್ರ ಪೂಜಾರಿ, ಎಸ್‌ಕೆಪಿಎ ಕಾಪು ವಲಯದಸದಸ್ಯರು, ಶಿಕ್ಷಕವೃಂದದವರು ಉಪಸ್ಥಿತರಿದ್ದರು.
ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಜಿನರಾಜ್‌ ಸಾಲಿಯಾನ್‌ ಸ್ವಾಗತಿಸಿದರು. ಎಸ್‌ಕೆಪಿಎ ಕಾಪು ವಲಯದ ಅಧ್ಯಕ್ಷ ಉದಯ ಮುಂಡ್ಕೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ವೀಣಾ ಕಾರ್ಯಕ್ರಮ ನಿರೂಪಿಸಿ, ವೀರೇಂದ್ರ ಶಿರ್ವ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next