Advertisement

ಸಹಾಯಕ್ಕೆ ಬಂದಾಗ ಗೊತ್ತಾಯಿತು ಕಿತ್ತುಹೋದ ಚಪ್ಪಲಿಯ ಅಸಲಿಯತ್ತು!

12:58 AM Dec 04, 2020 | sudhir |

ಚೆನ್ನೈ: “ಅಯ್ಯೋ ಪಾಪ ಕಷ್ಟದಲ್ಲಿದ್ದಾರೆ’ ಎಂದು ಸಹಾಯಕ್ಕೆ ಹೋದಾಗಲೇ, ಆ “ಕಷ್ಟ’ದಲ್ಲಿದ್ದವನ ನೈಜ ಮುಖ ಬಹಿರಂಗವಾಗಿದೆ!

Advertisement

ಚೆನ್ನೈ ಏರ್‌ಪೋರ್ಟ್‌ನಲ್ಲಿ ನಡೆದ ಘಟನೆಯಿದು. ವ್ಯಕ್ತಿಯೊಬ್ಬನ ಚಪ್ಪಲಿ ಕಿತ್ತುಹೋಯಿತು ಎಂದು ಅವನಿಗೆ ಸಹಾಯ ಮಾಡಲು ಮುಂದಾದ ಕಸ್ಟಮ್ಸ್‌ ಇಲಾಖೆಯ ಸಿಬಂದಿಗೆ, ಆ ಚಪ್ಪಲಿಯೊಳಗೆ 12 ಲಕ್ಷ ರೂ. ಮೌಲ್ಯ ದ 239 ಗ್ರಾಂ ಚಿನ್ನ ಸಿಕ್ಕಿದೆ! ಪ್ರಕರಣಕ್ಕೆ ಸಂಬಂಧಿಸಿ ಆತನನ್ನು ಬಂಧಿಸಲಾಗಿದೆ.

ತಮಿಳುನಾಡಿನ ರಾಮನಾಥಪುರಂನ ಮೊಹಮ್ಮದ್‌ ಹಾಸಿಂ ಅಲಿ (21) ದುಬಾೖಯಿಂದ ಚೆನ್ನೈಗೆ ಆಗಮಿಸಿದ್ದ. ವಿಮಾನ ನಿಲ್ದಾಣದಿಂದ ಹೊರ ಬರುತ್ತಿರುವಂತೆಯೇ ಆತ ಧರಿಸಿದ ಚರ್ಮದ ಚಪ್ಪಲಿ ತುಂಡಾಗಿ ಹೋಯಿತು. ಗೇಟ್‌ ಬಳಿಯೇ ಇದ್ದ ಕಸ್ಟಮ್ಸ್‌ ಇಲಾಖೆ ಸಿಬಂದಿ, ಅದನ್ನು ಆತನಿಗೆ ಹಿಂದಿರುಗಿಸಲು ಮುಂದಾದರು. ಆಗ ಚಪ್ಪಲಿ ಸಾಮಾನ್ಯಕ್ಕಿಂತ ಭಿನ್ನವಾಗಿರುವುದು ಅವರ ಗಮನಕ್ಕೆ ಬಂತು. ಸಾಮಾನ್ಯ ಚಪ್ಪಲಿಗೆ ಅಗಲವಾದ ಪಟ್ಟಿ ಇರುತ್ತದೆ. ಆದರೆ ಆ ಚಪ್ಪಲಿ ಕೊಂಚ ಭಿನ್ನವಾಗಿತ್ತು ಮಾತ್ರವಲ್ಲ ಭಾರವೂ ಇತ್ತು. ಕುತೂಹಲಗೊಂಡ ಅಧಿಕಾರಿಗಳು ಪರಿಶೀಲಿಸಿದಾಗ, ಚಪ್ಪಲಿಯ ಪಟ್ಟಿಯಲ್ಲಿಯೇ ಸಣ್ಣ ರಂಧ್ರ ಕೊರೆದು ಕೆಂಪು ರ್ಯಾಪರ್‌ನಲ್ಲಿ ದ್ರವೀಕೃತ ಚಿನ್ನವನ್ನು ಸುತ್ತಿಟ್ಟಿದ್ದು ಪತ್ತೆಯಾಯಿತು. ಈ ಹಿಂದೆಯೂ 14.12 ಲಕ್ಷ ರೂ. ಮೌಲ್ಯದ ಚಿನ್ನವನ್ನು ಈತ ಸಾಗಿಸಿದ್ದ ಎಂಬ ವಿಚಾರವೂ ಈಗ ಬಹಿರಂಗವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next