Advertisement

ಸಾಲ ಕಟ್ಟುವಂತೆ ರೈತನಿಗೆ ಎಸ್‌ಎಂಎಸ್‌ ಸಂದೇಶ!

06:50 AM Dec 07, 2018 | |

ಕೊಪ್ಪಳ: ನಿಗದಿತ ದಿನದೊಳಗೆ ಬೆಳೆ ಸಾಲ ಮರುಪಾವತಿಸುವಂತೆ ಆಂಧ್ರ ಬ್ಯಾಂಕ್‌ ರೈತರೊಬ್ಬರಿಗೆ ಎಸ್‌ಎಂಎಸ್‌ ಮೂಲಕ ಸಂದೇಶ ಕಳುಹಿಸಿದೆ. ತಾಲೂಕಿನ ಲಿಂಗದಳ್ಳಿಯ ರೈತ ಯಮನೂರಪ್ಪ ಮೇಟಿ ಎಂಬುವರಿಗೆ 1.70 ಲಕ್ಷ ರೂ. ಸಾಲವನ್ನು ನಿಗದಿತ ದಿನದೊಳಗೆ ಮರುಪಾವತಿಸಬೇಕು. ಇಲ್ಲದಿದ್ದರೆ ಬಡ್ಡಿ ತೆರಬೇಕಾಗುತ್ತದೆ ಎಂದು ಬ್ಯಾಂಕ್‌ ಎಚ್ಚರಿಕೆ ನೀಡಿದೆ. 

Advertisement

ಯಮನೂರಪ್ಪ ಮೇಟಿ 2017ರಲ್ಲಿ ಕೊಪ್ಪಳದ ಆಂಧ್ರ ಬ್ಯಾಂಕ್‌ನಲ್ಲಿ 4 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆ ಮೇಲೆ 1.70 ಲಕ್ಷ ರೂ.ಸಾಲ ಪಡೆ ದಿದ್ದರು. ರಾಜ್ಯ ಸರ್ಕಾರ ರೈತರಿಗೆ ನೋಟಿಸ್‌ ನೀಡದಂತೆ ಬ್ಯಾಂಕ್‌ಗಳಿಗೆ ಖಡಕ್‌ ಸೂಚನೆ ನೀಡುತ್ತಿದೆಯಾದರೂ ಕೆಲ ಬ್ಯಾಂಕ್‌ಗಳು ಕದ್ದು ಮುಚ್ಚಿ ನೋಟಿಸ್‌ ನೀಡುತ್ತಿವೆ.

ಸರ್ಕಾರ ಬ್ಯಾಂಕ್‌ ಮೇಲೆ ಒತ್ತಡ ಹೇರಿದಂತೆಲ್ಲ ಬ್ಯಾಂಕ್‌ಗಳು ಸಾಲ ವಸೂಲಾತಿಗೆ ಅನ್ಯ ಮಾರ್ಗ ಹುಡುಕುತ್ತಿವೆ. ಈ ಬಾರಿ ಬರ ಆವರಿಸಿದೆ. ಎಲ್ಲಿಂದ ಸಾಲ ಕಟ್ಟಬೇಕು ಎಂದು ರೈತ ಯಮನೂರಪ್ಪ ನೋವಿನಿಂದ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next