Advertisement

ಸಂಚಾರ ಸುಗಮ, ಪೂರ್ಣಗೊಳ್ಳಲಿದೆ ಕಾಮಗಾರಿ

10:59 AM May 21, 2018 | Team Udayavani |

ಬೆಳ್ತಂಗಡಿ: ಗುರುವಾಯನಕೆರೆ ಜಂಕ್ಷನ್‌ನಲ್ಲಿ ಶನಿವಾರ ರಸ್ತೆ ಡಾಮರನ್ನು ಕಿತ್ತು ಹಾಕಿದ್ದು, ರಾತ್ರಿ ವೆಟ್‌ ಮಿಕ್ಸ್‌ ಹಾಕಿ ಸರಿಪಡಿಸುವ ಕೆಲಸ ನಡೆದಿದ್ದು, ರವಿವಾರ ವಾಹನಗಳು ಸರಾಗವಾಗಿ ಚಲಿಸುವಂತಾಯಿತು. ಶುಕ್ರವಾರ ರಾತ್ರಿ ರಸ್ತೆ ಸರಿಪಡಿಸುವ ಸಲುವಾಗಿ ಡಾಂಬರು ಕಿತ್ತು ಹಾಕಿದ್ದು, ಶನಿವಾರ ಲಘು ವಾಹನಗಳ ಹಾಗೂ ದ್ವಿಚಕ್ರ ವಾಹನ ಸವಾರರು ಸರಾಗವಾಗಿ ಸಾಗಲು ಸಾಧ್ಯವಾಗದೆ ಪರದಾಡುವಂತಾಗಿತ್ತು.

Advertisement

ಶನಿವಾರ ರಾತ್ರಿ ವೆಟ್‌ ಮಿಕ್ಸ್‌ ಹಾಕಿರುವುದರಿಂದ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರವಾಗಿದೆ. ಆದರೆ ಇನ್ನೂ ಎರಡು ದಿನಗಳ ಕಾಮಗಾರಿ ಬಾಕಿಯಿದ್ದು ಮಳೆ ಬಂದಿರುವುದರಿಂದ ಅಡ್ಡಿಯಾಗುತ್ತಿದೆ. ಮಳೆ ಇಲ್ಲವಾದಲ್ಲಿ ಒಂದೇ ದಿನದಲ್ಲಿ ಕಾಮಗಾರಿ ಪುರ್ಣಗೊಳ್ಳಲಿದೆ. ಜನರು ಸರಾಗವಾಗಿ ಓಡಾಡಬಹುದು ಎನ್ನುವ ಭರವಸೆ ನೀಡಿದ್ದಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಯಶವಂತ್‌ ಅವರು.

Advertisement

Udayavani is now on Telegram. Click here to join our channel and stay updated with the latest news.

Next