Advertisement

ಹೊಗೆಕೆರೆ: ಕುಡಿಯುವ ನೀರಿನ ಸಮಸ್ಯೆಗೆ ಕೊನೆಗೂ ಮುಕ್ತಿ

11:57 PM Jun 20, 2019 | Team Udayavani |

ಕಡಬ: ಇಲ್ಲಿನ ಹೊಗೆಕೆರೆ ಪ್ರದೇಶದ ಜನರ ಕುಡಿಯುವ ನೀರಿನ ಬೇಡಿಕೆ ಕೊನೆಗೂ ಈಡೇರಿದೆ. ಹೊಸದಾಗಿ ಕೊರೆಸಲಾದ ಕೊಳವೆಬಾವಿಯಲ್ಲಿ ಭರಪೂರ ನೀರು ಲಭಿಸಿ, ಫಲಾನುಭವಿಗಳಿಗೆ ಕುಡಿ ಯುವ ನೀರು ಪೂರೈಸುವ ಕಾರ್ಯಕ್ಕೆ ಚಾಲನೆ ದೊರೆತಿದೆ.

Advertisement

ಏಳು ವರ್ಷಗಳ ಹಿಂದೆ ಇಲ್ಲಿನ ಫಲಾನುಭವಿಗಳಿಗಾಗಿ ಅನುಷ್ಠಾನ ಗೊಂಡಿದ್ದ ಕುಡಿಯುವ ನೀರಿನ ಯೋಜನೆ ಕೊಳವೆ ಬಾವಿಯಲ್ಲಿ ನೀರು ಲಭಿಸದೇ ನಿರು ಪಯುಕ್ತಗೊಂಡು ನನೆಗುದಿಗೆ ಬಿದ್ದಿತ್ತು. ಇದೀಗ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌ ಅವರ ಅನುದಾನದಲ್ಲಿ ಮತ್ತೆ ಕೊಳವೆ ಬಾವಿ ಕೊರೆಸಿ, ನೀರಿನ ಸಮಸ್ಯೆಯನ್ನು ನೀಗಿಸಲಾಗಿದೆ.

ಈ ಹಿಂದೆ ಕುಮಾರಿ ವಾಸುದೇವನ್‌ ಅವರು ಜಿ.ಪಂ. ಸದಸ್ಯರಾಗಿದ್ದ ವೇಳೆ ಹೊಗೆಕೆರೆಯಲ್ಲಿ ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯಲ್ಲಿ ಟ್ಯಾಂಕ್‌ ನಿರ್ಮಿಸಿ ಪೈಪ್‌ಲೈನ್‌ ಅಳವಡಿಸಿದ್ದರು. ಅನಂತರ ಮೂರು ಕಡೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದೆ ಫಲಾನುಭವಿಗಳಿಗೆ ನೀರು ಸರಬರಾಜು ಮಾಡಲು ಸಾಧ್ಯವಾಗಿರಲಿಲ್ಲ. ಕಡಿಯುವ ನೀರಿ ಯೋಜನೆ ನಿರುಪಯುಕ್ತ ವಾದ ಹಿನ್ನೆಲೆಯಲ್ಲಿ ಸ್ಥಳೀಯ ಫಲಾನು ಭವಿಗಳು ಪ್ರತಿಭಟನೆಯನ್ನೂ ಮಾಡಿದ್ದರು.

ಸುಮಾರು 30ಕ್ಕೂ ಹೆಚ್ಚು ಮನೆಯ ಫಲಾನುಭವಿಗಳಿಗೆ ಪ್ರಯೋಜನಕ್ಕೆ ಬರುವ ಈ ಕುಡಿಯುವ ನೀರಿನ ಯೋಜನೆಗೆ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌ ಅವರು ಚಾಲನೆ ನೀಡಿದರು. ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ, ಸದಸ್ಯ ರಾದ ಅಶ್ರಫ್‌ ಶೇಡಿಗುಂಡಿ, ಶರೀಫ್‌ ಎ.ಎಸ್‌., ಗುತ್ತಿಗೆದಾರ ಜೋಸ್‌ ಪ್ರಕಾಶ್‌, ನೀರಿನ ನಿರ್ವಾಹಕ ಅಬೂಬಕ್ಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next