Advertisement

ಸ್ಮಾರ್ಟ್‌ ಸಿಟಿ ಕಾಮಗಾರಿ ವೀಕ್ಷಣೆ

10:48 AM Dec 16, 2019 | Team Udayavani |

ಹುಬ್ಬಳ್ಳಿ: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವ ಗುಪ್ತ ಅವರು ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸುತ್ತಿರುವ ವಿವಿಧ ಸ್ಥಳಗಳ ಪರಿಶೀಲನೆಯನ್ನು ರವಿವಾರ ನಡೆಸಿದರು.

Advertisement

ಜನತಾ ಬಜಾರ್‌, ದುರ್ಗದ ಬಯಲು, ಎಂ.ಜಿ. ಮಾರುಕಟ್ಟೆ, ಚಿಟಗುಪ್ಪಿ ಆಸ್ಪತ್ರೆ, ಇಂದಿರಾ ಗಾಜಿನಮನೆ ಹಾಗೂ ವಿದ್ಯಾನಗರದ ತೋಳನಕೆರೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್‌, ಉಪವಿಭಾಗಾಧಿಕಾರಿ ಮಹಮದ್‌ ಜುಬೇರ, ಸ್ಮಾರ್ಟ್‌ ಸಿಟಿ ಯೋಜನಾಧಿಕಾರಿ ಶಕೀಲ ಅಹ್ಮದ್‌, ಐಎಎಸ್‌ ಪ್ರೊಬೇಷನರಿ ಅಧಿಕಾರಿ ಆಕೃತಿ ಬನ್ಸಾಲ್‌, ಹುಬ್ಬಳ್ಳಿ ನಗರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next