Advertisement

ಜೂನ್‌ನಲ್ಲಿ ಸ್ಮಾರ್ಟ್‌ ಸಿಟಿ ಕೆಲಸ ಆರಂಭ

12:53 PM Apr 18, 2017 | Team Udayavani |

ದಾವಣಗೆರೆ: ಜೂನ್‌ ತಿಂಗಳ ವೇಳೆಗೆ ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಗಳು ಆರಂಭ ಆಗಲಿವೆ ಎಂದು ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಅನಿರುದ್ಧ ಶ್ರವಣ್‌ ತಿಳಿಸಿದ್ದಾರೆ. 

Advertisement

ಸೋಮವಾರ ಪಾಲಿಕೆ ಸಭಾಂಗಣದಲ್ಲಿ ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಸ್ಮಾರ್ಟ್‌ ಸಿಟಿ ಯೋಜನೆಗೆ ಸದ್ಯ 380 ಕೋಟಿ ರೂ. ಬಿಡುಗಡೆ ಆಗಿದೆ. ಇದರಲ್ಲಿ ಮಂಡಿಪೇಟೆಯ ನಾಲ್ಕು ರಸ್ತೆಗಳಿಗೆ ಮಾತ್ರ ಯೋಜನೆ ಸಿದ್ಧಗೊಂಡಿದೆ.

ಜೂನ್‌ನಲ್ಲಿ ರಸ್ತೆ ಕಾಮಗಾರಿ ಪ್ರಾರಂಭವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌ರ ಪ್ರಶ್ನೆ ಉತ್ತರಿಸಿದರು. ಆಗ ಮಧ್ಯ ಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್‌, ಪಾಲಿಕೆಯಿಂದ ಅನುದಾನ ಬಳಕೆಯಲ್ಲಿ ತೀರಾ ನಿಧಾನ ಇದೆ. ಇದೇ ಕಾರಣಕ್ಕೆ ಸ್ಮಾರ್ಟ್‌ ಸಿಟಿ ಅನುದಾನ ಇದುವರೆಗೆ ಬಳಕೆ ಆಗಿಲ್ಲ ಎಂದರು. 

ಅದನ್ನು ಒಪ್ಪಿಕೊಂಡ ಅನಿರುದ್ಧ ಶ್ರವಣ್‌, ಜೂನ್‌ ವೇಳೆಗೆ ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿ ಆರಂಭ ಆಗಲಿವೆ. ಮೊದಲು ಮಂಡಿಪೇಟೆಯಲ್ಲಿರುವ ನಾಲ್ಕು ರಸ್ತೆಗಳನ್ನು ಸ್ಮಾರ್ಟ್‌ ರಸ್ತೆಗಳನ್ನಾಗಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ನಂತರ ಬಾಕಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next