Advertisement

ಸಣ್ಣ ಉಳಿತಾಯ ಬಡ್ಡಿದರ ಇಳಿಕೆಯಾಗದು

12:03 AM Apr 02, 2021 | Team Udayavani |

ಹೊಸದಿಲ್ಲಿ: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರ ಇಳಿಕೆ ನಿರ್ಧಾರವನ್ನು ಕೇಂದ್ರ ಸರಕಾರ ವಾಪಸ್‌ ಪಡೆದಿದೆ. “ಇದು ಕಣ್ತಪ್ಪಿ ನಿಂದ ಆಗಿರುವ ನಿರ್ಧಾರ. ಬಡ್ಡಿ ದರ ಗಳು ಯಥಾಸ್ಥಿತಿಯಲ್ಲಿ ಮುಂದು ವರಿಯಲಿವೆ’ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಟ್ವೀಟ್‌ ಮಾಡಿ  ದ್ದಾರೆ. ಜತೆಗೆ ಬುಧ ವಾರ ಪ್ರಕಟಿಸಿದ್ದ ಬಡ್ಡಿ ದರ ಇಳಿಕೆ ಆದೇಶ ವಾಪಸ್‌ ಪಡೆದಿರುವುದಾಗಿ ಹೇಳಿದ್ದಾರೆ.

Advertisement

ಜತೆಗೆ ಸಾರ್ವಜನಿಕ ಭವಿಷ್ಯನಿಧಿ (ಪಿಪಿಎಫ್) ಖಾತೆಗಳಲ್ಲಿ ಹೂಡಿಕೆ ಮೇಲೆ ಸಿಗುವ ಬಡ್ಡಿ ದರದ ಮೇಲೆ ತೆರಿಗೆ ವಿಧಿಸುವ ನಿರ್ಧಾರ ವನ್ನೂ ವಿತ್ತ ಸಚಿ ವಾಲಯ ಹಿಂಪಡೆದಿದೆ. ವಿತ್ತ ಸಚಿವೆ ಇದನ್ನು ಪ್ರಕಟಿಸಿದ್ದಾರೆ. ಪಿಪಿಎಫ್ನಲ್ಲಿ ವಾರ್ಷಿಕವಾಗಿ 2.5 ಲಕ್ಷ ರೂ.ಗಳಿಗಿಂತ ಹೆಚ್ಚಿನ ಹೂಡಿಕೆ ಮೇಲೆ ಬರುವ ಬಡ್ಡಿಗೆ ತೆರಿಗೆ ಹಾಕುವ ಬಗ್ಗೆ ಪ್ರಸ್ತಾವಿಸಲಾಗಿತ್ತು.

ಇದೇವೇಳೆ, ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುವ ಭಾರತೀಯರ ವೇತನಕ್ಕೆ ಭಾರತದಲ್ಲಿ ತೆರಿಗೆ ವಿಧಿ ಸುವುದಿಲ್ಲ. ಈ ಹಿಂದಿನಂತೆ ಅದು ತೆರಿಗೆ ಮುಕ್ತ ವಾಗಿಯೇ ಮುಂದುವರಿಯಲಿದೆ ಎಂದೂ ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಟ್ವೀಟ್‌ಗೆ ಉತ್ತರವಾಗಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next