Advertisement

ಚುನಾವಣೆ ಖರ್ಚಿಗೆಂದು ಸಿದ್ದರಾಮಯ್ಯಗೆ ಉಳಿತಾಯದ ಹಣ ನೀಡಿದ ಬಾಲೆ

03:44 PM Feb 11, 2023 | keerthan |

ವಿಜಯಪುರ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಚುನಾವಣಾ ವೆಚ್ಚಕ್ಕಾಗಿ ಬಾಲೆಯೊಬ್ಬಳು ತನ್ನ ಉಳಿತಾಯದ ಹಣ ನೀಡಿದ ಘಟನೆ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ನಡೆದಿದೆ.

Advertisement

ಸೋಮವಾರ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಹಾಗೂ ಸಮಾವೇಶಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಜಿಯಾ ರಫೀಕ್ ಮಣೂರು ಎಂಬ ಬಾಲೆ ಐದು ಸಾವಿರ ರೂ. ಚುನಾವಣಾ ದೇಣಿಗೆ ನೀಡಿದಳು.

ಇದನ್ನೂ ಓದಿ:ನಾಗ್ಪುರ ಟೆಸ್ಟ್ ಗೆದ್ದ ಕೂಡಲೇ ಜಡೇಜಾಗೆ ಶಾಕ್: ಪಂದ್ಯ ಶುಲ್ಕದ 25% ದಂಡ

ಹೆತ್ತವರು ತನಗಾಗಿ ಹೆತ್ತವರು ನೀಡಿದ ಹಣವನ್ನು ಉಳಿತಾಯ ಮಾಡಿದ್ದ 11 ವರ್ಷದ ಜಿಯಾ 5 ಸಾವಿರ ರೂ. ಹಣವನ್ನು ಸಿದ್ದರಾಮಯ್ಯ ಅವರಿಗೆ ದೇಣಿಗೆಯಾಗಿ ನೀಡಿದಳು.

ಬಾಲಕಿ‌ ಜಿಯಾಳ ಗುಣಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಬಾಲಕಿ ನೀಡಿದ ಹಣವನ್ನು ಆಕೆಗೆ ಮರಳಿ ನೀಡಿದರು. ನಿನ್ನ ವಿದ್ಯಾಭ್ಯಾಸಕ್ಕೆ ಹಣ ಬಳಸು ಎಂದು ಸಲಹೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next