Advertisement

ಉಳ್ಳವರ ಮನೆಯಲ್ಲಿ ಸ್ಲಂ ವಾಸ್ತವ್ಯ ನಾಟಕ: ಕುಮಾರ ಸ್ವಾಮಿ ಟೀಕೆ

06:30 AM Feb 13, 2018 | Harsha Rao |

ತೀರ್ಥಹಳ್ಳಿ: ಬಿಜೆಪಿ ನಾಯಕರಿಗೆ ಈ ಹಿಂದೆ ಐದು ವರ್ಷ ಅಧಿಕಾರದಲ್ಲಿದ್ದಾಗ ಕೊಳೆಗೇರಿ ಜನರ ನೆನಪಾಗಲಿಲ್ಲ. ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸ್ಲಂನಲ್ಲಿ ವಾಸ ಮಾಡುವವರು ನೆನಪಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಬಿಜೆಪಿ ವಿರುದಟಛಿ ಹರಿಹಾಯ್ದರು. 

Advertisement

ತಾಲೂಕಿನ ಕೋಣಂದೂರಿನಲ್ಲಿ ಸೋಮವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಅಂತಸ್ತಿನ ಉಳ್ಳವರ ಮನೆಯಲ್ಲಿ ವಾಸ್ತವ್ಯ ಹೂಡುತ್ತಿರುವ ಬಿಜೆಪಿ ನಾಯಕರು ಕೊಳೆಗೇರಿ ನಿವಾಸಿಗಳ ಹೆಸರಲ್ಲಿ ಸ್ಲಂ ವಾಸ್ತವ್ಯ ಎಂಬ ನಾಟಕವಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next