Advertisement

ಜೆಡಿಯು ಕಾರ್ಯಕ್ರಮ: ಸಿಎಂ ನಿತೀಶ್‌ ಮೇಲೆ ಚಪ್ಪಲಿ ಎಸೆತ; ಓರ್ವ ಸೆರೆ

05:32 PM Oct 11, 2018 | Team Udayavani |

ಪಟ್ನಾ : ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ರಾಷ್ಟ್ರಾಧ್ಯಕ್ಷ, ನಿತೀಶ್‌ ಕುಮಾರ್‌ ಮತ್ತು ಪಕ್ಷದ ಹಿರಿಯ ಉನ್ನತ ನಾಯಕರು ಇಂದಿಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲಿ ಆಸೀನರಾಗಿದ್ದ ವೇಳೆ ಯುವಕನೊಬ್ಬ ವೇದಿಕೆಯನ್ನು ಗುರಿ ಇರಿಸಿ ಚಪ್ಪಲಿ ಎಸೆದ ಘಟನೆ ನಡೆದಿದೆ. 

Advertisement

ಆದರೆ ಆತ ಎಸೆದ ಚಪ್ಪಲಿ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಸಭಿಕರ ಮೇಲೆ ಎರಗಿತೇ ವಿನಾ ನಿತೀಶ್‌ ಕುಮಾರ್‌ ಗೆ ತಾಗಲಿಲ್ಲ ಎಂದು ವರದಿಗಳು ತಿಳಿಸಿವೆ. 

ಚಪ್ಪಲಿ ಎಸೆದ ತರುಣನನ್ನು ಚಂದನ್‌ ಎಂದು ಗುರುತಿಸಲಾಗಿದೆ. ಆತ ಈ ಕೃತ್ಯ ಎಸಗಿದೊಡನೆಯೇ ಆತನನ್ನು ಪಕ್ಷದ ಕಾರ್ಯಕರ್ತರು ಹಿಡಿದು ಎಳೆದಾಡಿ ಹಿಗ್ಗಾಮುಗ್ಗ ಹೊಡೆದರೆಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಚಂದನ್‌ ನನ್ನು ಪೊಲೀಸರು ಅಲ್ಲಿಂದ ಹೊರಗೆ ಒಯ್ದರು. 

ಲೋಕ ನಾಯಕ ಜಯಪ್ರಕಾಶ ನಾರಾಯಣ್‌ ಅವರ ಜನ್ಮ ವರ್ಷಾಚರಣೆಯ ಪ್ರಯುಕ್ತ ನಗರದ ಬಾಪು ಸಭಾಗರ್‌ ಆಡಿಟೋರಿಯಂ ನಲ್ಲಿ ನಡೆಸಿದ್ದ ಛಾತ್ರ ಸಮಾಗಮ (ವಿದ್ಯಾರ್ಥಿ ಸಮಾವೇಶ) ಕಾರ್ಯಕ್ರಮದಲ್ಲಿ ಚಪ್ಪಲಿ ಎಸೆದ ಘಟನೆ ನಡೆಯಿತು. ವೇದಿಕೆಯಲ್ಲಿ ಸಿಎಂ ನಿತೀಶ್‌ ಅವರೊಂದಿಗೆ ಜೆಡಿಯು ರಾಜ್ಯ ಘಟಕದ ಮುಖ್ಯಸ್ಥ ವಸಿಷ್ಠ ನಾರಾಯಣ ಸಿಂಗ್‌ ಮತ್ತು ಇತರ ಉನ್ನತ ನಾಯಕರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next