Advertisement

ಆಫ್ ಸೆಟ್‌ನಿಂದ ಕೌಶಲ ವೃದ್ಧಿ

01:19 AM Jul 16, 2019 | Team Udayavani |

ಹೊಸದಿಲ್ಲಿ: ರಫೇಲ್‌ ಯುದ್ಧ ವಿಮಾನದ ಒಪ್ಪಂದದಲ್ಲಿ ಮಾಡಿಕೊಂಡ ಆಫ್ಸೆಟ್‌ ಕರಾರಿನಿಂದ ದೇಶದ ಯುವಕರಿಗೆ ಕೌಶಲ ಮತ್ತು ತರಬೇತಿ ಒದಗಿಸಲು ನೆರವಾಗಲಿದೆ. ಕೌಶಲಕ್ಕಾಗಿ ಯಾವುದೇ ದಲ್ಲಾಳಿಗೂ ಇಲ್ಲಿ ಲಂಚ ನೀಡುವ ಅಗತ್ಯವೂ ಇರು ವುದಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ಯುವ ಕೌಶಲ ದಿನದಂದು ನವ ದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಆಫ್ಸೆಟ್‌ನ ಹಣವು ತರಬೇತಿ ಉದ್ದೇಶಕ್ಕೆ ಬಳಸಲಾಗುತ್ತದೆ. ಈ ಸಂಬಂಧ ಡಸ್ಸಾಲ್ಟ್ ಕಂಪೆನಿಯ ಜೊತೆಗೆ ಐಟಿಐ ನಾಗ್ಪುರ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ.ಲೋಕಸಭೆ ಚುನಾವಣೆ ವೇಳೆ ರಫೇಲ್‌ ಜೆಟ್‌ ಒಪ್ಪಂದಕ್ಕಾಗಿ ಉದ್ಯಮಿಗಳಿಗೆ ಮೋದಿ ಹಣ ನೀಡಿದ್ದಾರೆ ಎಂದು ಅಪಪ್ರಚಾರ ಮಾಡಲಾಗಿತ್ತು. ಆದರೆ ಆ ಹಣ ನೀಡಿರುವುದು ಯುವ ಕರಿಗೆ ತರಬೇತಿ ನೀಡುವ ಉದ್ದೇಶಕ್ಕೆ ಎಂದು ಸಚಿವೆ ನಿರ್ಮಲಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next