Advertisement

ಜಾರ್ಖಂಡ್ ವಿಧಾನಸಭಾ ಚುನಾವಣೆಗೂ ಮುನ್ನ ವಿಪಕ್ಷಗಳ 6 ಶಾಸಕರು ಬಿಜೆಪಿ ತೆಕ್ಕೆಗೆ

09:36 AM Oct 24, 2019 | Team Udayavani |

ರಾಂಚಿ:ಮುಂಬರುವ ವಿಧಾನಸಭಾ ಚುನಾವಣೆಯ ನಡುವೆಯೇ ಜಾರ್ಖಂಡ್ ನಲ್ಲಿ ವಿರೋಧ ಪಕ್ಷದ ಆರು ಮಂದಿ ಶಾಸಕರು ಬುಧವಾರ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮುಖ್ಯಮಂತ್ರಿ ರಘುವರ್ ದಾಸ್ ಸಮ್ಮುಖದಲ್ಲಿ ಆರು ಶಾಸಕರು ಬಿಜೆಪಿ ಸೇರ್ಪಡೆಗೊಂಡರು.

Advertisement

ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ)ದ ಶಾಸಕ ಕುನಾಲ್ ಸಾರಂಗಿ, ಜೆಪಿ ಭಾಯಿ ಪಟೇಲ್ ಮತ್ತು ಛಾಮ್ರಾ ಲಿಂಡಾ, ಕಾಂಗ್ರೆಸ್ ಪಕ್ಷದ ಸುಖ್ ದೇವೋ ಭಗತ್ ಹಾಗೂ ನವ ಜವಾನ್ ಸಂಘರ್ಷ ಮೋರ್ಚಾದ ಮನೋಜ್ ಯಾದವ್, ಭಾನು ಪ್ರತಾಪ್ ಶಾಹಿ ಆಡಳಿತಾರೂಢ ಬಿಜೆಪಿ ಪಕ್ಷದ ತೆಕ್ಕೆಗೆ ಸೇರ್ಪಡೆಗೊಂಡಿದ್ದಾರೆ.

ವಿರೋಧ ಪಕ್ಷಗಳ ಶಾಸಕರ ಪಕ್ಷಾಂತರದಿಂದಾಗಿ ಜಾರ್ಖಂಡ್ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ವಿಪಕ್ಷಗಳ ಬಲ ಕುಗ್ಗಿದಂತಾಗಿದೆ ಎಂದು ವರದಿ ವಿವರಿಸಿದೆ. ಬಿಜೆಪಿ ಈಗಾಗಲೇ ಜನ್ ಆಶೀರ್ವಾದ್ ಯಾತ್ರಾ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next