Advertisement

ಬಿಜೆಪಿಯ ಆರು ಶಾಸಕರು ಸಂಪರ್ಕದಲ್ಲಿ: ಬೋಸರಾಜ್‌

06:00 AM Sep 18, 2018 | |

ರಾಯಚೂರು: ಬಿಜೆಪಿಯ ಆರು ಜನ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ನಮ್ಮ 20 ಶಾಸಕರು ಯಾರೆಂದು
ಬಿಜೆಪಿಯವರು ತಿಳಿಸಲಿ. ನಾವು ಆರು ಜನರ ಹೆಸರು ಬಹಿರಂಗ ಪಡಿಸುವುದಾಗಿ ಕೆಪಿಸಿಸಿ ಕಾರ್ಯದರ್ಶಿ ಎನ್‌.ಎಸ್‌.
ಬೋಸರಾಜ್‌ ಹೇಳಿದರು. 

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಆದರೆ, ಏನೂ ಮಾಡಲು ಸಾಧ್ಯವಿಲ್ಲ. ಬಿಜೆಪಿಯವರ ಅನೇಕ ಕುತಂತ್ರಗಳಲ್ಲಿ ಇದೊಂದು.

ಅವರು ಮತ್ತೆ ಹಳೆಯ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್‌ನ ಯಾವ ಶಾಸಕರೂ ಬಿಜೆಪಿಗೆ ಹೋಗಲ್ಲ ಎಂದು ರಾಜ್ಯದ
ಹೈಕಮಾಂಡ್‌ ನಾಯಕರು ತಿಳಿಸಿದ್ದಾರೆ. ಅಲ್ಲದೇ, ಎಲ್ಲ ಶಾಸಕರು ಈಗಾಗಲೇ ಪಕ್ಷ ಬಿಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next