ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 47ರ ಆಲೂರು ಕ್ರಾಸ್ ಬಳಿ ನಡೆದ ಸರಣಿ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಹಿರಿಯೂರಿನ ಆಲೂರು ಗ್ರಾಮದ ಬಳಿ ಈರುಳ್ಳಿ ತುಂಬಿದ್ದ ಲಾರಿಯ ಚಕ್ರ ಸ್ಪೋಟವಾಗಿ ಪಲ್ಟಿಯಾಗಿದೆ. ಹೀಗಾಗಿ ಒಂದು ಕಾರು ಮತ್ತು ಆರು ಲಾರಿಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿ, ಹತ್ತಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ.
ಹುಯಿಲಗೋಳ ಮೂಲದ ರಮೇಶ್ (30 ವ) ಪ್ರತಾಪ್ ಹಟ್ಟಿ (29 ವ) ಹನುಮಪ್ಪ ಕಳಕಪ್ಪ (30 ವ), ಗುರಪ್ಪ ಹೂಗಾರ್ (29 ವ) ಮೃತಪಟ್ಟವರು. ಇವರುಗಳು ಬೆಂಗಳೂರಿಗೆ ಈರುಳ್ಳಿ ಮಾರಾಟಕ್ಕೆ ಹೊರಟಿದ್ದರು.
ಇದನ್ನೂ ಓದಿ:ಕಾರ್ಕಳದ ಅಳಿಯ ಲೆ| ಕ| ಸಿಂಗ್ಗೆ ಅಶ್ರುವಿದಾಯ
ಬೇರೆ ಬೇರೆ ಲಾರಿ, ಕಾರಿನಲ್ಲಿದ್ದ ಹತ್ತು ಜನರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ರಾಧಿಕಾ ಮತ್ತು ಇತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.