Advertisement

ಬಂಗಾಲ ಕೊಲ್ಲಿಯಲ್ಲಿ 6 ಬೆಸ್ತರ ರಕ್ಷಣೆ; ಇನ್ನೂ 31 ಮೀನುಗಾರರು ನಾಪತ್ತೆ

10:36 AM Jul 09, 2019 | Sathish malya |

ಕಾಕದ್ವೀಪ/ಕೋಲ್ಕತ : ಬಂಗಾಲ ಕೊಲ್ಲಿಯಲ್ಲಿ ಕಡಲು ತೀವ್ರವಾಗಿ ಪ್ರಕ್ಷುಬ್ದವಾಗಿರಲಿದೆ ಎಂಬ ಹವಾಮಾನ ಮುನ್ಸೂಚನೆಗೆ ಡೋಂಟ್‌ ಕೇರ್‌ ಎನ್ನುವಂತೆ ನಾಲ್ಕು ದಿನಗಳ ಹಿಂದೆ ಕಡಲಿಗಿಳಿದು ನಾಪತ್ತೆಯಾಗಿದ್ದ 31 ಮೀನುಗಾರರ ಪೈಕಿ ಆರು ಮಂದಿಯನ್ನು ಇಂದು ಸೋಮವಾರ ರಕ್ಷಿಸಲಾಗಿದೆ.

Advertisement

ಹಾಗಿದ್ದರೂ ಇನ್ನೂ 25 ಮೀನುಗಾರರು ಪತ್ತೆಯಾಗಿಲ್ಲ; ಅವರ ಗತಿ ಏನಾಗಿದೆ ಎಂಬುದೂ ತಿಳಿದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಶನಿವಾರ ಇನ್ನೊಂದು ಬೋಟಿನಲ್ಲಿದ್ದ 13 ಮೀನುಗಾರರು, ಯಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರ ಬೋಟು ಬಾಂಗ್ಲಾದೇಶದತ್ತ ಹೆದ್ದೆರೆಗಳಿಂದ ಸೆಳೆಯಲ್ಪಟ್ಟಾಗ ಭಾರತೀಯ ತಟ ರಕ್ಷಣಾ ಪಡೆ ಮತ್ತು ಬಾಂಗ್ಲಾ ರಕ್ಷಣಾ ತಂಡದವರು ಅವರನುನ ರಕ್ಷಿಸಿದರು.

ಇದರೊಂದಿಗೆ ರಕ್ಷಿಸಲ್ಪಟ್ಟ ಒಟ್ಟು ಮೀನುಗಾರರ ಸಂಖ್ಯೆ 49 ಆಗಿದೆ ಎಂದು ರಕ್ಷಣಾ ಅಧಿಕಾರಿ ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next