Advertisement

Siruguppa: ತುಂಗಭದ್ರಾ ನದಿಗೆ ಹಾರಿದ ರಾಜಸ್ಥಾನ್ ಮೂಲದ ಯುವಕ

02:53 PM Aug 15, 2024 | Team Udayavani |

ಸಿರುಗುಪ್ಪ: ತಾಲೂಕಿನ ದೇಶನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತುಂಗಭದ್ರಾನದಿಯ ಸೇತುವೆ ಮೇಲಿಂದ ರಾಜಸ್ಥಾನ ಮೂಲದ ಯುವಕನೊಬ್ಬ ನದಿಗೆ ಹಾರಿದ ಘಟನೆ ಗುರುವಾರ (ಆ.೧೫) ನಡೆದಿದೆ.

Advertisement

ನದಿಗೆ ಹಾರಿದ ಯುವಕನನ್ನು ಧನ್ಯರಾಮಕುಶಾಲ್ರಾಮ್(20) ಎಂದು ಗುರುತಿಸಲಾಗಿದೆ.

ಮಧ್ಯಾಹ್ನ 12 ಗಂಟೆಗೆ ಯುವಕನು ನದಿಗೆ ಹಾರಿದ್ದಾನೆಂದು ಹೇಳಲಾಗುತ್ತಿದೆ. ಆದರೆ ಯುವಕ ನದಿಗೆ ಹಾರಿದ ಬಗ್ಗೆ ಯಾವುದೇ ಸಾರ್ವಜನಿಕರು ನೋಡಿಲ್ಲವೆಂದು ಹೇಳಲಾಗುತ್ತಿದೆ,ಆದರೆ ನದಿ ದಡದಲ್ಲಿ ಯುವಕನಿಗೆ ಸೇರಿದ ಬೈಕ್ ಪತ್ತೆಯಾಗಿದ್ದು,ಯುವಕ ನದಿಗೆ ಹಾರಿದ್ದಾನೆಂದು ಹೇಳಲಾಗುತ್ತಿದ್ದು.ಸ್ಥಳಕ್ಕೆ ತಹಸೀಲ್ದಾರ್ ಎಚ್ ವಿಶ್ವನಾಥ್, ಡಿ ವೈ ಎಸ್ ಪಿ ವೆಂಕಟೇಶ್, ಸಿಪಿಐ ಹನುಮಂತಪ್ಪ, ಪಿಎಸ್ಐ ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಜಸ್ಥಾನ ಮೂಲದ ಯುವಕನು ತುಂಗಭದ್ರಾ ನದಿಗೆ ಹಾರಿದ್ದಾನೆಂದು ಹೇಳಲಾಗುತ್ತಿದೆ. ಆದರೆ ಯುವಕ ನದಿಗೆ ಹಾರಿದ ಬಗ್ಗೆ ಪ್ರತ್ಯಕ್ಷ ಸಾಕ್ಷಿಗಳು ಇಲ್ಲ. ಆದರೆ ಯುವಕನಿಗೆ ಸೇರಿದ ಬೈಕ್ ಸೇತುವೆ ಸಮೀಪ ಪತ್ತೆಯಾಗಿದ್ದು,ಯುವಕನ ಶವ ಪತ್ತೆಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ನುರಿತ ಈಜುಗಾರರಿಂದ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಡಿವೈಎಸ್ಪಿ ವೆಂಕಟೇಶ್ ಅವರು ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next