Advertisement

Sirsi; ಕದಂಬೋತ್ಸವ ಸಿದ್ಧತೆ ವೀಕ್ಷಿಸಿದ ಶಾಸಕ ದ್ವಯರು

08:45 PM Mar 04, 2024 | Team Udayavani |

ಶಿರಸಿ: ಬನವಾಸಿಯಲ್ಲಿ ಮಾ 5 ಹಾಗೂ 6 ರಂದು‌ ನಡೆಯುವ ರಾಜ್ಯ‌ ಮಟ್ಟದ‌ ಕದಂಬೋತ್ಸವ ಪೂರ್ವ ಸಿದ್ದತೆಯನ್ನು ಶಾಸಕ ಶಿವರಾಮ ಹೆಬ್ಬಾರ್, ಶಾಸಕ ಭೀಮಣ್ಣ ನಾಯ್ಕ ಪ್ರತ್ಯೇಕವಾಗಿ ಸೋಮವಾರ ವೀಕ್ಷಿಸಿದರು. ಈ ವೇಳೆ ಎಸಿ ಅಪರ್ಣಾ ರಮೇಶ, ತಹಸೀಲ್ದಾರ ಶ್ರೀಧರ‌ ಮುಂದಲಮನಿ ಇತರರು ಉಭಯ ಶಾದಕರಿಗೆ ಮಾಹಿತಿ ನೀಡಿದರು.

Advertisement

ಮಾ.5 ಕ್ಕೆ ಸಂಜೆ 6ಕ್ಕೆ‌ ಸಿಎಂ‌ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, ಇಪ್ಪತ್ತು ಸಾವಿರಕ್ಕೂ ಅಧಿಕ‌ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಕಲ ಸಿದ್ದತೆಗಳು ನಡೆದಿದೆ. ಕ್ರೀಡಾ ಸ್ಪರ್ಧೆ ಜೊತೆ ಮಾ.6 ರಂದು ರಾಜ್ಯ ‌ಮಟ್ಟದ ಕುಸ್ತಿ ಪಂದ್ಯ‌ ಕೂಡ ನಡೆಯಲಿದೆ. ಫಲ ಪುಷ್ಪ ಪ್ರದರ್ಶನ ನಡೆಯಲಿದೆ. ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ರಘು ದೀಕ್ಷಿತ್ , ಹರಿಕೃಷ್ಣ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ‌ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next