Advertisement

Sirsi ; ಬೇಲಿಯ ಬಲೆಯಲ್ಲಿ ಸಿಕ್ಕಿಕೊಂಡ ಬೃಹತ್ ಹೆಬ್ಬಾವಿನ ರಕ್ಷಣೆ

04:56 PM Sep 24, 2023 | Team Udayavani |

ಶಿರಸಿ: ತಾಲೂಕಿನ ಬಿದ್ರಳ್ಳಿಯ ತಿಲಕ ನಾಯ್ಕ ಎನ್ನುವವರ ಮನೆಯ ಸಮೀಪ ಬೇಲಿಗೆ ಕಟ್ಟಲಾಗಿದ್ದ ಬಲೆಯಲ್ಲಿ ಸಿಲುಕಿದ ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಿಸಿ, ಸುರಕ್ಷಿತವಾಗಿ ಕಾಡಿಗೆ ತೆರಳಲು ಅವಕಾಶ ಒದಗಿಸಿದ ಘಟನೆ ನಡೆದಿದೆ.

Advertisement

ಸುಮಾರು 10 ಅಡಿ ಉದ್ದದ ಹೆಬ್ಬಾವು ಬೇಲಿಯ ಬಲೆಯ ಕಿಂಡಿಯಲ್ಲಿ ಸಿಲುಕಿ ಮುಂದೆ ತೆರಳಲಾದರೆ ಒದ್ದಾಡುತ್ತಿದ್ದುದನ್ನು ಗಮನಿಸಿದ ತಿಲಕ, ಉಂಚಳ್ಳಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಫಾರೆಸ್ಟ್ ಗಾರ್ಡ್ ಮಂಜುನಾಥ ಹಾಗೂ ವಾಚರ್ ಕೋಟೆಗುಡ್ಡೆ ಮಂಜಣ್ಣ ಸ್ಥಳಕ್ಕೆ ಆಗಮಿಸಿ, ಬಲೆಯನ್ನು ತುಂಡರಿಸಿ, ಹೆಬ್ಬಾವು ಸುರಕ್ಷಿತವಾಗಿ ಚಲಿಸಲು, ಅರಣ್ಯಕ್ಕೆ ತೆರಳಲು ಅನುವು ಮಾಡಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next