Advertisement

Sirsi: ಸುಧೀರ ಹೆಗಡೆರಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ

03:16 PM Jan 25, 2024 | Team Udayavani |

ಶಿರಸಿ: ಬೆಂಗಳೂರಿನ ಮಾನವ ಹಕ್ಕು ಆಯೋಗದ ಡಿಎಸ್ಪಿ ಸುಧೀರ ಮಹದೇವ ಹೆಗಡೆ ಹುಲೇಮಳಗಿ ಅವರಿಗೆ  ರಾಷ್ಟ್ರಪತಿಗಳ ವಿಶಿಷ್ಟ ಪೊಲೀಸ್ ಸೇವಾ ಪದಕ ಘೋಷಣೆಯಾಗಿದೆ.

Advertisement

ಪೊಲೀಸ್ ಅಧಿಕಾರಿಯೊಬ್ಬರಿಗೆ ಭಾರತದಲ್ಲಿ ನೀಡಲಾಗುವ  ಅತ್ಯಂತ ಗರಿಷ್ಠ  ಪದಕ ಇದಾಗಿದ್ದು, ಪೊಲೀಸ್‌ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಲಿದ್ದಾರೆ. ಅತ್ಯಂತ ಕಠಿಣ ಅಪರಾಧಗಳನ್ನು ಅದರ ಒಂದು ಅಂತ್ಯಕ್ಕೆ ತಲುಪಿಸಿ ಹೆಚ್ಚಿನ ಪ್ರಮಾಣದ ಶಿಕ್ಷೆಗೊಳಗಾಗುವಂತೆ ಮಾಡುವಲ್ಲಿ ಇವರು ಅತ್ಯಂತ ಕರ್ತವ್ಯನಿಷ್ಠರಾಗಿದ್ದಾರೆ.

ಈಗಾಗಲೇ ಸಿಎಂ ಪದಕ, ರಾಜ್ಯ ಪಾಲರ ಪ್ರಶಸ್ತಿ, ನಮ್ಮನೆ ಪ್ರಶಸ್ತಿ, ಸ್ವರ್ಣವಲ್ಲೀ ಮಠದ ಸುರಕ್ಷಾ ಸುಧೀರ ಪ್ರಶಸ್ತಿ, ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ,ಕೇಂದ್ರ ಗೃಹ ಸಚಿವರ ಉತ್ತಮ ತನಿಖಾಧಿಕಾರಿ‌ ಪ್ರಶಸ್ತಿ, ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳೂ ಸಂದಿವೆ ಎಂಬುದು ಉಲ್ಲೇಖನೀಯ.

Advertisement

Udayavani is now on Telegram. Click here to join our channel and stay updated with the latest news.

Next