Advertisement

Sirsi-Kumta road: ರಾಗಿಹೊಸಳ್ಳಿ ಗುಡ್ಡ ಕುಸಿತ; ಮತ್ತಷ್ಟು ಅವಾಂತರ!

10:21 AM Jul 19, 2024 | Team Udayavani |

ಶಿರಸಿ: ರಾಗಿಹೊಸಳ್ಳಿ ಗುಡ್ಡ‌ಕುಸಿದು ರಾಷ್ಟ್ರಿಯ ಹೆದ್ದಾರಿ 766ಇ ಶಿರಸಿ-ಕುಮಟಾ ಸಂಪರ್ಕ ಕಡಿತವಾಗಿದ್ದು, ಶುಕ್ರವಾರಕ್ಕೆ 5ನೇ ದಿನಕ್ಕೆ ಕಾಲಿಟ್ಟಿದೆ.

Advertisement

ಜು.15ರ ಸೋಮವಾರ ರಾತ್ರಿ ಕುಸಿದ ಗುಡ್ಡ ತೆರವಿಗೆ ಜು.16ರ ಮಂಗಳವಾರದಿಂದ ಹಗಲು-ರಾತ್ರಿ ಎನ್ನದೇ‌ ಕೆಲಸ ಮಾಡಲಾಗುತ್ತಿತ್ತು. ಸಾಗರ ಮಾಲಾ ಯೋಜನೆಯಲ್ಲಿ ಗುತ್ತಿಗೆ ಪಡೆದ ಆರ್.ಎಸ್.ಎನ್.ಎಸ್. ಕಂಪನಿ ಹಾಗೂ ತಾಲೂಕು ಆಡಳಿತ ಮರ ಹಾಗೂ ಮಣ್ಣಿನ ತೆರವು‌ ಮಾಡುತ್ತಿತ್ತು. ಇದೀಗ ಜು.20ರ ಶನಿವಾರ ಸಂಜೆಯೊಳಗೆ ತೆರವು ಕಾರ್ಯಾಚರಣೆ ಮುಗಿಸಿ ನಾಳೆಯಿಂದ (ಶನಿವಾರ) ಸಂಚಾರಕ್ಕೆ ಬಳಸಬಹುದೆಂಬ‌ ಲೆಕ್ಕಾಚಾರ ಕೂಡ ಈಗ ತಲೆಕೆಳಗಾಗಿದೆ.

ಜು. 18ರ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ‌ ಮತ್ತೆ ಗುಡ್ಡ ರಸ್ತೆಗೆ ಬಿದ್ದಿದೆ. ಎಕರೆಗೂ ಅಧಿಕ ಕ್ಷೇತ್ರದ ಮಣ್ಣು ರಸ್ತೆಯಿಂದ ತೆರವು ಮಾಡಿದರೂ ಖಾಲಿಯಾಗದ ಸ್ಥಿತಿ ನಿರ್ಮಾಣವಾಗಿದೆ.

ಬದಲಿ ಮಾರ್ಗ ಹೀಗಿದೆ :
ಅಂಕೋಲಾ, ಕಾರವಾರ, ಗೋವಾಗಳಿಗೆ ಸಂಚರಿಸುವವರು ಯಲ್ಲಾಪುರ ಮಾರ್ಗವಾಗಿ ಸಂಚರಿಸಬೇಕು, ಗೋಕರ್ಣ ಕುಮಟಾಕ್ಕೆ ಯಾಣ ಮಾರ್ಗವಾಗಿ ಸಂಚರಿಸಬೇಕು, ಹಾಗೆಯೇ ಹೊನ್ನಾವರ ಕುಮಟಾ, ಮಂಗಳೂರು ಭಾಗಗಳಿಗೆ‌ ಸಂಚರಿಸುವವರು ಸಿದ್ದಾಪುರ ಬಡಾಳ ಘಟ್ಟದ‌ ಮೂಲಕ ಸಂಚರಿಸಲು ಸೂಚಿಸಲಾಗಿದೆ ಎಂದು ಶಿರಸಿ ತಹಶೀಲ್ದಾರ ಶ್ರೀಧರ‌ ಮುಂದಲಮನಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next