Advertisement

Sirsi; ಮನೆಯಲ್ಲಿ ಜನರಿದ್ದಾಗಲೇ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವು

06:17 PM Aug 24, 2023 | Team Udayavani |

ಶಿರಸಿ: ನಗರದ ಅಯೋಧ್ಯಾ ಕಾಲೋನಿಯ ಮನೆ ಒಂದರ ದೇವರ ಕೋಣೆಯಲ್ಲಿ ಇಟ್ಟಿದ್ದ ಚಿನ್ನ ಬೆಳ್ಳಿ ಆಭರಣ ಮತ್ತು ನಗದುಗಳನ್ನು ಕಳ್ಳರು ದೋಚಿದ ಘಟನೆ ಬುಧವಾರ ರಾತ್ರಿ ರಾತ್ರಿ ನಡೆದಿದೆ. ಹೊಲಿಗೆ ಮಷೀನ್ ಡೀಲರ್ ಆಗಿರುವ ಆಶೀಶ್ ವಿಲಾಸ್ ಲೋಖಂಡೆ ಅವರು ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Advertisement

ಮನೆಯ‌ ಮಹಡಿಯ ಮೇಲೆ ಹಾಗೂ ಕೆಳಗಡೆ ಒಂದು ರೂಮಿನಲ್ಲಿ ಮನೆಯ ಜನರು ಮಲಗಿದ್ದರೂ, ಯಾರೂ ಇರದ ಕೋಣೆಯಿಂದ ಚೋರರು ಸದ್ದಾಗದಂತೆ ಕಿಟಕಿ ಬಾಗಿಲು ಮುರಿದು ಒಳಗೆ ಬಂದು ವರಮಹಾಲಕ್ಷ್ಮೀ ಪೂಜೆಗೆ ಇಟ್ಟಿದ್ದ ಆಭರಣ ಕದ್ದೊಯ್ದಿದ್ದಾರೆ.

ದೇವರ ಕೋಣೆಯಲ್ಲಿದ್ದ ಬಂಗಾರದ ನೆಕ್ಲೆಸ್, ಬಂಗಾರದ ಬಳೆಗಳು, ಬೆಳ್ಳಿ ತಂಬಿಗೆ, ಆರತಿ ಸೆಟ್, ಬೆಳ್ಳಿಯ ಕಾಮಾಕ್ಷಿ ದೀಪ, ಬೆಳ್ಳಿ ಲೋಟ, 4000 ರೂ‌ ನಗದು ಸೇರಿದಂತೆ 5,28,000 ರೂ. ಆಭರಣ ಮತ್ತು ನಗುದನ್ನು ದೋಚಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾರುಕಟ್ಟೆಯ ಪಿಎಸ್ಐ ಮಾಲಿನಿ ಹಾಸಭಾವಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಚೋರರು ಸ್ಥಳೀಯರೇ, ಹೊರಗಿನವರೇ ಎಂದೂ ತನಿಖೆ ‌ಮಾಡಲಾಗುತ್ತಿದೆ. ಸಿಸಿಟಿವಿಗಳನ್ನೂ ಪರಿಶೀಲಿಸಲಾಗುತ್ತಿದೆ.

ಎಲ್ಲ‌ ಮೂಲದಿಂದಲೂ ತನಿಖೆ
ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಎಲ್ಲ ವಿಭಾಗದಿಂದಲೂ ಸೂಕ್ಷ್ಮ ತನಿಖೆ ಆರಂಭಿಸಿದ್ದಾರೆ. ಕಾರವಾರದಿಂದ ಶ್ವಾನ ದಳ, ಬೆರಳಚ್ಚು ತಜ್ಞರೂ ಕೂಡ ಆಗಮಿಸಿ ತ‌ನಿಖೆ ಚುರುಕಿಗೆ ಸಹಕಾರ ನೀಡಿದ್ದಾರೆ.ಉತ್ತರ ಕನ್ನಡ ಜಿಲ್ಲಾ ಸೋಕೋ ಅಧಿಕಾರಿ ವಿನುತಾ ಅವರು ಬಂದು ಪರಿಶೀಲಿಸಿದ್ದಾರೆ. ಹುಬ್ಬಳ್ಳಿಯಿಂದ ಪೋರೆನ್ಸಿಕ್ ತಂಡದ ಅಧಿಕಾರಿ ಡಾಕ್ಟರ್ ಮಾಂತೇಶ್ ರವರಿಂದಲೂ ಘಟನೆ ಸ್ಥಳವನ್ನು ಪರಿಶೀಲಿಸಲಾಗುತ್ತಿದೆ.

ಮೂರು‌ ತಂಡ ರಚನೆ
ಶಿರಸಿ ಡಿಎಸ್ಪಿ ರವರಾದ ಕೆ.ಎಲ್.ಗಣೇಶ ಅವರ ಮಾರ್ಗದರ್ಶನದಲ್ಲಿ, ತನಿಖಾಧಿಕಾರಿ ಸಿಪಿಐ ರಾಮಚಂದ್ರ ನಾಯಕ, ಗ್ರಾಮೀಣ ಠಾಣೆಯ ಇನಸ್ಪೆಕ್ಟರ್‌ ಸೀತಾರಾಮ್ ಪಿ, ಪಿಎಸ್ಐ ರತ್ನ ಕೆ, ಮಾಲಿನಿ ಹಾಂಸಬಾವಿ, ನಗರ ಠಾಣೆಯ ರಾಜಕುಮಾರ್ ಮಹಾಂತೇಶ್, ಪ್ರತಾಪ್, ದಯಾ ಜೋಗಳೇಕರ್, ಶಿರಸಿ ತಾಲೂಕಿನ ನುರಿತ ಅಪರಾಧ ಸಿಬ್ಬಂದಿಗಳಾದ ಮಹಾಂತೇಶ, ಅಶೋಕ, ಚಂದ್ರಪ್ಪ ಶಿವರಾಜ್, ಪ್ರಶಾಂತ್, ಸದ್ದಾಂ, ಗಣಪತಿ, ಎಲ್ಲಪ್ಪ ಇತರೆ ಅಧಿಕಾರಿ ಸಿಬ್ಬಂದಿಗಳು ಮನೆ ಕಳ್ಳತನದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಶಿರಸಿ ಪೊಲೀಸರು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದು, ಶೀಘ್ರ ಪತ್ತೆ ಮಾಡುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next