Advertisement

ಕಲ್ಲಕೈ ಬಳಿ ಆಕಸ್ಮಿಕ ಅಗ್ನಿ ಅವಘಡ: ಸುಟ್ಟು ಕರಕಲಾದ ಅಡಿಕೆ ತೋಟ

07:30 PM Apr 03, 2023 | Team Udayavani |

ಶಿರಸಿ: ಆಕಸ್ಮಿಕವಾಗಿ ಅಗ್ನಿ ತಗುಲಿದ ಪರಿಣಾಮ ಎರಡು ಎಕರೆಯಷ್ಟು ಅಡಿಕೆ ತೋಟ ಸುಟ್ಟು ಕರಕಲಾದ ಘಟನೆ ತಾಲೂಕಿನ ಕಲ್ಲಕೈನಲ್ಲಿ ನಡೆದಿದೆ.

Advertisement

ಮಧುಕೇಶ್ವರ ಗಣಪತಿ ಹೆಗಡೆ‌ ಅವರಿಗೆ ಸಂಬಂಧಿಸಿದ ಐದಾಳಿಗದ್ದೆಯ ಹೊಸ್ತೋಟಕ್ಕೆ ಮಧ್ಯಾಹ್ನ ೩ ಗಂಟೆ ಸುಮಾರಿಗೆ ಬೆಂಕಿ ತಗುಲಿರುವುದು ಗಮನಕ್ಕೆ ಬಂದಿದೆ. ಬೆಂಕಿ ತಗುಲಿದ ಪರಿಣಾಮ ಅಡಿಕೆ ಸಸಿಗಳು, ಮರಗಳು, ಬಾಳೆ, ಕಾಳುಮೆಣಸು, ಜಾಯಿಕಾಯಿ ‌ಮತ್ತಿತರ ಗಿಡಗಳು ಬೆಂಕಿಗೆ ಆಹುತಿಯಾಗಿವೆ.

ಅಗ್ನಿ ಶಾಮಕ‌ ದಳದ ವಾಹನ ಬಂದರೂ ಅಡಿಕೆ ತೋಟಕ್ಕೆ ಹೋಗಲು ದಾರಿ‌ ಇಲ್ಲದೇ ವಾಪಸ್ ಹೋಗಬೇಕಾಯಿತು ಬಳಿಕ ಊರವರ ಸಹಕಾರದಿಂದ ಬೆಂಕಿ‌ ನಂದಿಸುವ ಪ್ರಯತ್ನ ಮಾಡಲಾಯಿತು.

ಇದನ್ನೂ ಓದಿ: ಜಾರ್ಖಂಡ್ ನಲ್ಲಿ ಹನುಮಾನ್ ವಿಗ್ರಹ ಧ್ವಂಸ ನಂತರ ಉದ್ವಿಗ್ನ; ಇಂಟರ್ನೆಟ್ ಸೇವೆ ಸ್ಥಗಿತ

Advertisement

Udayavani is now on Telegram. Click here to join our channel and stay updated with the latest news.

Next