Advertisement

Sirsi: ಹಿರಿಯ ಯಕ್ಷಗಾನ ಗುರು, ಭಾಗವತ ಕೆ.ಪಿ. ಹೆಗಡೆಗೆ ವಾರ್ಷಿಕ ಸಿರಿಕಲಾ ಪ್ರಶಸ್ತಿ

04:52 PM Oct 16, 2024 | Team Udayavani |

ಶಿರಸಿ: ಬೆಂಗಳೂರಿನ ಸಿರಿಕಲಾ ಮೇಳದಿಂದ ನೀಡಲಾಗುವ ವಾರ್ಷಿಕ ಸಿರಿಕಲಾ ಪುರಸ್ಕಾರವನ್ನು ಈ ಬಾರಿ ಹಿರಿಯ ಯಕ್ಷಗಾನ ಗುರು, ಭಾಗವತ ಕೆ.ಪಿ.ಹೆಗಡೆ ಗೋಳಗೋಡ ಅವರಿಗೆ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಮೇಳದ ಪ್ರಮುಖ ಸುರೇಶ ಹೆಗಡೆ ಕಡತೋಕ ತಿಳಿಸಿದ್ದಾರೆ.

Advertisement

ಸಾವಿರಾರು ಯಕ್ಷಗಾನ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಹಂಗಾರಕಟ್ಟೆಯ ಗುರು ಕೆ.ಪಿ.ಹೆಗಡೆ ಅವರು ಮೂಲತಃ ಸಿದ್ದಾಪುರ ತಾಲೂಕಿನ ಗೋಳಗೋಡಿನವರು.

ಅ.20 ರಂದು ಬೆಂಗಳೂರಿನ ಉ.ಕ. ಜಿಲ್ಲಾ ಸಭಾಂಗಣದಲ್ಲಿ ನಡೆಯುವ ಸಿರಿಕಲಾ ಯಕ್ಷತ್ರಿವಳಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಮೇಳದ ಇನ್ನೋರ್ವ ಪ್ರಮುಖ ಟಿ.ಎಸ್. ಮಹಾಬಲೇಶ್ವರ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next