Advertisement

Sirsi: ಒಂದೇ ಊರಿನ ಇಬ್ಬರಿಗೆ 2ನೇ, 5ನೇ ರ‍್ಯಾಂಕ್

02:18 PM May 09, 2024 | Team Udayavani |

ಶಿರಸಿ: ಇಲ್ಲಿ‌ನ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿರುವ ಒಂದೇ ಊರಿ‌ನ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ಎರಡು, ನಾಲ್ಕನೇ‌ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

Advertisement

ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಓದಿದ ಇಲ್ಲಿ‌ನ ಮಾರಿಕಾಂಬಾ ಪ್ರೌಢಶಾಲಾ ವಿದ್ಯಾರ್ಥಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಹುತಗಾರಿನ ದರ್ಶನ್ ಸುಬ್ರಾಯ ಭಟ್ಟ 652ಕ್ಕೆ 624 ಅಂಕ ಪಡೆದು ಸಾಧನೆ ಮಾಡಿದ್ದಾನೆ. ಸುಬ್ರಾಯ ಭಟ್ಟ ಹಾಗೂ ವಿಜಯಲಕ್ಷ್ಮಿ ಭಟ್ಟ ದಂಪತಿ‌ ಪುತ್ರ.

ಇದೇ ಊರಿನ ಸ್ಪಂದನಾ ರವೀಂದ್ರ ಭಟ್ 625ಕ್ಕೆ 621 ಅಂಕ ಪಡೆದು ರಾಜ್ಯಕ್ಕೆ ಐದನೇ ಸ್ಥಾನ ‌ಪಡೆದಿದ್ದಾಳೆ. ಈಕೆ ಉಷಾ ಭಟ್ ಹಾಗೂ ರವೀಂದ್ರ ಭಟ್ ದಂಪತಿಯ ಪುತ್ರಿ.

ಸರಕಾರಿ ಶಾಲೆಯಲ್ಲೇ ಓದಿ ರಾಜ್ಯಕ್ಕೆ ನಂ.2 !

ಶಿರಸಿ: ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಓದಿದ ಇಲ್ಲಿ‌ನ ಮಾರಿಕಾಂಬಾ ಪ್ರೌಢಶಾಲಾ ವಿದ್ಯಾರ್ಥಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾನೆ.

Advertisement

ಹುತಗಾರಿನ ದರ್ಶನ್ ಸುಬ್ರಾಯ ಭಟ್ಟ 652ಕ್ಕೆ 624 ಅಂಕ ಪಡೆದು ಈ ಸಾಧನೆ ಮಾಡಿದ್ದಾನೆ. ಈತ ಸುಬ್ರಾಯ ಭಟ್ಟ, ವಿಜಯಲಕ್ಷ್ಮಿ ಭಟ್ಟ ದಂಪತಿ ಪುತ್ರ.

ಪಾಲಕರ, ಶಾಲಾ ಶಿಕ್ಷಕರ ಪ್ರೋತ್ಸಾಹ ಇದಕ್ಕೆ ಕಾರಣ. ನಿತ್ಯ 4 ತಾಸು ಓದುತ್ತಿದ್ದೆ.  ಅಂದಿನ ಅಭ್ಯಾಸ ಅಂದೇ ಮಾಡುತ್ತಿದ್ದೆ. ಸಮಾಜ ವಿಜ್ಞಾನದಲ್ಲಿ ಒಂದು‌ ಅಂಕದ ಪ್ರಶ್ನೆಗೆ ಕಳೆದುಕೊಂಡೆ. ಮುಂದೆ ಇಂಜೀನಿಯರ್ ಆಗುವ ಆಸೆ ಇದೆ ಎನ್ನುತ್ತಾನೆ ದರ್ಶನ್.

ಮನೆಯಲ್ಲಿ ಮಗನ, ಶಾಲೆಯಲ್ಲಿ ವಿದ್ಯಾರ್ಥಿ ಸಾಧನೆಗೆ ಶಿಕ್ಷಕರಲ್ಲಿ ಸಂಭ್ರಮ‌ ತಂದಿದೆ. ನಮಗೆ ಈ ಸಾಧನೆ ಖುಷಿ ತಂದಿದೆ ಎನ್ನುತ್ತಾರೆ ಮಾರಿಕಾಂಬಾ ಸರಕಾರಿ ಶಾಲಾ ಪ್ರಾಚಾರ್ಯ ಯಜ್ಞೇಶ್ವರ ನಾಯ್ಕ.

Advertisement

Udayavani is now on Telegram. Click here to join our channel and stay updated with the latest news.

Next