Advertisement

ಕಡ್ದಾಯ ಮತದಾನ ಜಾರಿಯಾಗಲಿ: ತರಳಬಾಳು ಶ್ರೀ

04:43 PM Apr 19, 2019 | Naveen |

ಸಿರಿಗೆರೆ: ಚಿತ್ರದುರ್ಗ ಜಿಲ್ಲೆ ಸಿರಿಗೆರೆಯಲ್ಲಿ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗುರುವಾರ ಮತ
ಚಲಾಯಿಸಿದರು.

Advertisement

ಸಿರಿಗೆರೆಯ ಮತಗಟ್ಟೆ ಸಂಖ್ಯೆ 70 ರಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ದೇಶದಲ್ಲಿ ಕಡ್ಡಾಯ
ಮತದಾನ ಪದ್ಧತಿ ಜಾರಿಯಾಗಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಮತದಾನ ಮಾಡದ ಮತದಾರರಿಗೆ ದೇಶದಲ್ಲಿ ದೊರೆಯುವ ಸೌಲಭ್ಯಗಳನ್ನು ನಿರಾಕರಿಸಬೇಕು. ವಿವಿಧ ಇಲಾಖೆ  ಗಳಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಭಡ್ತಿ ಮತ್ತಿತರ ಸೌಕರ್ಯ ನಿಲ್ಲಿಸಬೇಕು.

ಹಾಗೆಯೇ ಸಾಮಾನ್ಯ ಮತದಾರರಿಗೆ ಲಭ್ಯವಿರುವ ಪಡಿತರ, ಅಡುಗೆ ಅನಿಲ ಮುಂತಾದ ಸೌಲಭ್ಯಗಳನ್ನು ತಡೆ ಹಿಡಿಯಬೇಕು.
ಆಗ ಮಾತ್ರ ಎಲ್ಲರೂ ಮತದಾನ ವ್ಯವಸ್ಥೆಯಲ್ಲಿ ಭಾಗಿಯಾಗುತ್ತಾರೆ ಎಂದು ಪ್ರತಿಪಾದಿಸಿದರು. ನಾಗರಿಕರೆಲ್ಲರೂ ಮತದಾನ ಮಾಡ ಬೇಕು.

ಮತದಾನ ಮಾಡುವವರು ನಾಗರಿಕರು, ಮತದಾನ ಮಾಡದವರು ಅನಾಗರಿಕರು. ಗ್ರಾಮೀಣ ಪ್ರದೇಶದ ಮತದಾರರ ಮನವೊಲಿಸಿ ಶೇ. 100 ರಷ್ಟು ಮತದಾನ ಆಗುವಂತೆ ನೋಡಿಕೊಳ್ಳಬೇಕು. ಓಟು ಮಾಡುವ ಸಂದರ್ಭದಲ್ಲಿ ಬೆರಳಿಗೆ ಹಚ್ಚುವ ಕಪ್ಪು ಮಸಿ ಮೈಗೆ
ಹತ್ತದಂತೆ ನೋಡಿಕೊಳ್ಳಬೇಕು ಎಂದು ಮಾರ್ಮಿಕವಾಗಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next