Advertisement

ರಾಜಾ ಖುಲಾಸೆಯಾಗಿದ್ದಕ್ಕೆ ಖುಷಿಯಾಯ್ತು ಎಂದ ಸಿಂಗ್‌

06:40 AM Jan 05, 2018 | Team Udayavani |

ನವದೆಹಲಿ: 2ಜಿ ಹಗರಣದಲ್ಲಿ ಆರೋಪಮುಕ್ತರಾಗಿರುವ ಟೆಲಿಕಾಂ ಮಾಜಿ ಸಚಿವ ಎ.ರಾಜಾ ಪತ್ರಕ್ಕೆ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ಪ್ರತಿಕ್ರಿಯಿಸಿದ್ದು, ನೀವು ಆರೋಪ ಮುಕ್ತವಾಗಿದ್ದು ನನಗೆ ಖುಷಿ ನೀಡಿದೆ ಎಂದಿದ್ದಾರೆ. ಕಳೆದ ಡಿ.21ರಂದು ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ವಿಚಾರಣೆಯ ಅವಧಿಯಲ್ಲಿ ಬೆಂಬಲಿಸಿದ್ದಕ್ಕೆ ಸಿಂಗ್‌ಗೆ ರಾಜಾ ಭಾವನಾತ್ಮಕ ಪತ್ರ ಬರೆದಿದ್ದರು. ನಾನು ಏನೂ ತಪ್ಪು ಮಾಡಿಲ್ಲ. ದೇಶದ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ. ಇದನ್ನು ನಾನು ಸಾಬೀತು ಮಾಡುತ್ತೇನೆ ಎಂದು ನಾನು ನಿಮಗೆ ಹಲವು ಬಾರಿ ಭರವಸೆ ನೀಡಿದ್ದೆ ಎಂದು ಸಿಂಗ್‌ಗೆ ಬರೆದ ಪತ್ರದಲ್ಲಿ ರಾಜಾ ಉಲ್ಲೇಖೀಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next