Advertisement

Sindhanur ಬಿಡಾಡಿ ದನಗಳನ್ನು ರಕ್ಷಿಸಿದ ಕಮಿಷನರ್: ಬೆದರಿಕೆ ಹಾಕಿದ ಕಿಡಿಗೇಡಿಗಳು

11:55 PM Sep 26, 2023 | Team Udayavani |

ಸಿಂಧನೂರು: ಬಿಡಾಡಿ ದನಗಳನ್ನು ಸಂರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಲು ಮುಂದಾದ ನಗರಸಭೆ ಪೌರಾಯುಕ್ತರಿಗೆ ಕೆಲ ಕಿಡಿಗೇಡಿಗಳು ಬೆದರಿಕೆ ಹಾಕಿದ ಘಟನೆ ಮಂಗಳವಾರ ರಾತ್ರಿ 11.30 ರ ಸುಮಾರಿಗೆ ನಗರದಲ್ಲಿ ನಡೆದಿದೆ.

Advertisement

ಪೌರಾಯುಕ್ತ ಮಂಜುನಾಥ ಗುಂಡೂರು ಅವರು ತಮ್ಮ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಬಿಡಾಡಿ ದನಗಳ ರಕ್ಷಣೆಗೆ ಮುಂದಾದಾಗ ಕೆಲ ಕಿಡಿಗೇಡಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲವರು ಒಂದು ಹಂತದಲ್ಲಿ ತಂಟೆಗೆ ಬರಬೇಡ ಎಂದು ಪೌರಾಯುಕ್ತರಿಗೆ ಬೆದರಿಕೆ ಶೈಲಿಯಲ್ಲಿ ಮಾತನಾಡಿದ್ದಾರೆ. ಮೊದಲೇ ಪೊಲೀಸ್ ಹಾಗೂ ಸಿಬ್ಬಂದಿ ತಂಡವನ್ನು ಕಟ್ಟಿಕೊಂಡು ಹೋಗಿದ್ದ ಪೌರಾಯುಕ್ತರು, ಹತ್ತಾರು ಬೀದಿ ದನಗಳನ್ನು ತಮ್ಮದೇ ವಾಹನಗಳಿಗೆ ಏರಿಸಿ, ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಡಾಡಿ ದನಗಳ ವಿಷಯದಲ್ಲಿ ನೋಟಿಸ್ ಕೊಟ್ಟರೂ ಬಾರದ ವ್ಯಕ್ತಿಗಳು, ಕಾರ್ಯಾಚರಣೆ ಸಂದರ್ಭ ಕಮಿಷನರ್ ಗೆ ಬೆದರಿಕೆ ಹಾಕಲು ಪ್ರಯತ್ನಿಸಿದ್ದು, ಅಚ್ಚರಿಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next