Advertisement

Sindhanur: ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿ; ಶೋಧ ಕಾರ್ಯ ಚುರುಕು

04:10 PM Aug 14, 2024 | Team Udayavani |

ಸಿಂಧನೂರು: ವ್ಯಕ್ತಿಯೊಬ್ಬರು ತಾಲೂಕಿನ ಹಿರೇಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ಆ.14ರ ಬುಧವಾರ ನಡೆದಿರುವ ಬಗ್ಗೆ ವರದಿಯಾಗಿದೆ.

Advertisement

ಗಿಣಿವಾರ ಗ್ರಾಮದ ಸಾಯಿಬಣ್ಣ ತಂದೆ ಗ್ಯಾನಪ್ಪ ( 50) ಕೊಚ್ಚಿ ಹೋದ ವ್ಯಕ್ತಿ.

ಹಿರೇಹಳ್ಳದ ಬಳಿಯೇ ತುಂಗಭದ್ರಾ ನದಿ‌ ಹಿನ್ನೀರು ಸೇರಿಕೊಂಡ ಹಿನ್ನೆಲೆ ನದಿಯಲ್ಲಿ ಕೊಚ್ಚಿ ಹೋಗಿರಬಹುದು ಎಂಬ ಶಂಕಿಸಲಾಗಿದೆ.

ಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆಯೊಂದರಲ್ಲಿ ಪಾಲ್ಗೊಂಡು ನಂತರ ಸ್ನಾನಕ್ಕೆಂದು ನದಿಗೆ ಹೋದ ಸಂದರ್ಭ ಈ ಘಟನೆ ಸಂಭವಿಸಿದೆ.

Advertisement

ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ ತುರ್ತು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ವ್ಯಕ್ತಿಯ ಪತ್ತೆಗಾಗಿ ಅಗ್ನಶಾಮಕ ಠಾಣೆ ತಂಡ ಹಾಗೂ ನುರಿತ ಈಜುಗಾರರು, ಹರಿಗೋಲು ಇಳಿಸಿ ಶೋಧ ಕಾರ್ಯ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next