Advertisement

ಜಾತಿ -ಧರ್ಮಾತೀತ ರಾಷ್ಟ್ರಕವಿ ಕುವೆಂಪು

03:06 PM Jan 01, 2020 | Naveen |

ಸಿಂಧನೂರು: ರಾಷ್ಟ್ರಕವಿ ಎಂದೇ ಹೆಸರಾದ ಕುವೆಂಪು ಅವರು ವಿಶ್ವಮಾನವ ಕಲ್ಪನೆಯನ್ನು ಮೈಗೂಡಿಸಿಕೊಂಡು ಬೆಳದು ಜಾತಿ, ಧರ್ಮಗಳ ಗಡಿಯನ್ನು ಮೀರಿದವರಾಗಿದ್ದರು ಎಂದು ಕಸಾಪ ತಾಲೂಕು ಅಧ್ಯಕ್ಷೆ ಸರಸ್ವತಿ ಪಾಟೀಲ ಹೇಳಿದರು.

Advertisement

ನಗರದ ರಾಜೇಂದ್ರಕುಮಾರ ಮೆಮೋರಿಯಲ್‌ ಶಾಲೆಯಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಪ್ರಯುಕ್ತ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುವೆಂಪು ಕನ್ನಡ ನಾಡು ಕಂಡ ಶ್ರೇಷ್ಠ ಸಾಹಿತಿ. ಭಾರತೀಯ ಸಾಹಿತ್ಯಕ್ಕೆ ಅವರ ಕೊಡುಗೆ ಅನನ್ಯವಾಗಿದೆ. ಅವರ ಮಂತ್ರ ಮಾಂಗಲ್ಯದ ಕಲ್ಪನೆಯು ಅನೇಕ ಯುವಜನರಿಗೆ ಮಾದರಿಯಾಗಿದೆ. ವೈದಿಕ ವಿಚಾರಗಳೊಂದಿಗೆ ಯಾರೊಂದಿಗೂ ಕೂಡಾ ರಾಜಿಯಾಗಲಿಲ್ಲ. ಅವರ ಮಾನವೀಯತೆಯ ಮೌಲ್ಯಗಳು ಓದುಗರನ್ನು ಬಡಿದೆಬ್ಬಿಸುತ್ತಿದ್ದವು ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ಶಂಕರ ಗುರಿಕಾರ, ಕೋಶಾಧ್ಯಕ್ಷ ವೀರೇಶ ಯರದಿಹಾಳ, ಕಾರ್ಯದರ್ಶಿ ಬಸವರಾಜ ಗಸ್ತಿ, ಮುಖ್ಯಗುರು ಈಶ್ವರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next