Advertisement

ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯವಾಗಿರಿ: ರಾಜಣ್ಣ

06:25 PM May 25, 2020 | Naveen |

ಸಿಂದಗಿ: ಕೋವಿಡ್ ಸೋಂಕು ಹೋಗಲಾಡಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ ಹೇಳಿದರು.

Advertisement

ಪಟ್ಟಣದಲ್ಲಿ ದಿ ಅಸೋಸಿಯೇಷನ್‌ ಆಫ್‌ ಪಿಪಲ್‌ ವಿತ್‌ ಡೆಸೇಬಿಲಿಟಿ ಬೆಂಗಳೂರು ಹಾಗೂ ಅಂಗವಿಕಲರ ಐಕ್ಯತಾ ವೇದಿಕೆ ಸಿಂದಗಿ (ಎಪಿಡಿ) ಅವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆಹಾರ ಕಿಟ್‌ ವಿತರಣಾ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಅಂಗವಿಕಲರಿಗೆ ಆಹಾರದ ಕಿಟ್‌ ವಿತರಣೆ ಮಾಡಿದ ಎರಡು ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು. ಸ್ಥಳೀಯ ಶ್ರೀ ಪದ್ಮರಾಜ ಬಿಎಸ್‌ಡಬ್ಲ್ಯೂ ಕಾಲೇಜಿನ ಉಪನ್ಯಾಸಕ ಮಹಾಂತೇಶ ನೂಲಾನವರ ಮಾತನಾಡಿ, ಸುಮಾರು 13 ವರ್ಷಗಳಿಂದ ಐಕ್ಯತಾ ವೇದಿಕೆ ತಾಲೂಕಿನಲ್ಲಿ ಕಾರ್ಯನಿರ್ವಹಿಸುವ ಮೂಲಕ ಅಂಗವಿಕಲರ ಸಮಸ್ಯೆಗೆ ಸ್ಪಂದಿಸುತ್ತ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷೆ ಸಬಿಯಾ ಮರ್ತೂರ, ಶಾಬುದ್ದಿನ ಬುಕ್‌ದ, ದಾವಲಸಾಬ ಮರ್ತೂರ, ಲಕ್ಷ್ಮೀ ರಾಠೋಡ, ಸುರೇಖಾ ಗುರವ, ಯಲ್ಲಮ್ಮ ಮುಳವಾಡ, ವಿಜಯ ಭಜಂತ್ರಿ, ಸಲೀಮ ಮಂದೇವಾಲಿ, ರಾಜು ಯಡ್ರಾಮಿ, ವಿಜಯಲಕ್ಷ್ಮೀ ಬೈರೊಡಗಿ ಸೇರಿದಂತೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next