Advertisement

ಸಂವಿಧಾನ ಗೌರವಿಸಿ: ಮನಗೂಳಿ

04:02 PM Jul 12, 2019 | Naveen |

ಸಿಂದಗಿ: ಭಾರತ ಜಾತ್ಯತೀತ ರಾಷ್ಟ್ರ, ಸಂವಿಧಾನ ನಮ್ಮ ಗ್ರಂಥ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಹೇಳಿದರು.

Advertisement

ಪಟ್ಟಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಬೌದ್ಧ ಧರ್ಮದ ದಿಕ್ಷಾ ಕಾರ್ಯಕ್ರಮ, ಮೌಡ್ಯ ವಿರೋಧಿ ಹಾಗೂ ಸಸಿ ನಡೆಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ| ಅಂಬೇಡ್ಕರ್‌ ಅವರ ಅವಿರತ ಪ್ರಯತ್ನದಿಂದ ಭಾರತಕ್ಕೆ ಸಿಕ್ಕ ವåಹಾನ್‌ ಗ್ರಂಥ ಸಂವಿಧಾನವಾಗಿದೆ. ನಾವೆಲ್ಲರೂ ಸಂವಿಧಾನವನ್ನು ಅರಿತು ಗೌರವಿಸೋಣ ಎಂದರು.

ದಲಿತ ಚಳವಳಿ ಮುಖಂಡ ಎಚ್.ಎಂ. ರುದ್ರಸ್ವಾಮಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ| ಡಿ.ಜಿ. ಸಾಗರ ಮಾತನಾಡಿ, ಭಾರತದಲ್ಲಿ ಜಾತಿರಹಿತ, ವರ್ಗರಹಿತ, ಅಸಮಾನತೆ ರಹಿತ, ಹಸಿವು ಮತ್ತು ಬಡತನ ಮುಕ್ತ ಭಾರತ ನಿರ್ಮಾಣ ಆಗಬೇಕಿರುವುದು ಸಂವಿಧಾನದ ಆಶಯ. ಈ ನಿಟ್ಟಿನಲ್ಲಿ ಎಲ್ಲ ಪ್ರಗತಿಪರ ವಿಚಾರವಾದಿ ಸಂಘಟನೆಗಳು ಕಾರ್ಯ ನಿರ್ವಹಿಸಬೇಕಾಗಿದೆ. ಯಾರು ತುಳಿತಕ್ಕೆ ಶೋಷಣೆಗೆ ಒಳಗಾಗಿದ್ದಾರೆಯೋ, ಅಂತರವರ ಒಳಿತಿಗೆ ದುಡಿಯುತ್ತಿರುವ ರಾಜ್ಯದ ಏಕೈಕ ಸಂಘಟನೆ ಕರ್ನಾಟಕ ರಾಜ್ಯ ಸಂಘರ್ಷ ಸಮಿತಿ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ. ಮಯೂರ ಅವರಿಗೆ ರಮಾಬಾಯಿ ಅಂಬೇಡ್ಕರ್‌ ಮಹಿಳಾ ಸಂಘ ಪಡಗಾನೂರ ವತಿಯಿಂದ ಆಧುನಿಕ ಸಿದ್ದನಾಕ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

Advertisement

ಸಾನ್ನಿಧ್ಯ ವಹಿಸಿದ್ದ ಸಂಘಪಾಲ ಬಂತೇಜಿ ಆಶೀರ್ವಚನ ನೀಡಿದರು. ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ವಿಠ್ಠಲ ಕೋಳ್ಳೂರ, ದಸಂಸ ರಾಜ್ಯ ಸಂಘಟನಾ ಸಂಚಾಲಕ ರಮೇಶ ಆಸಂಗಿ, ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಪಪಂ ಸದಸ್ಯ ಶಿವಾನಂದ ಜಗತಿ, ಕೂಲಿ ಕಬ್ಬಲಿಗ ಯುವ ವೇದಿಕೆ ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ, ಅಂಬಣ್ಣ ಜಿವಣಗಿ, ಬಿ.ಸಿ. ವಾಲಿ, ಎಸ್‌.ಪಿ. ಸುಳ್ಳದ, ಡಾ| ದಸ್ತಗೀರ್‌ ಮುಲ್ಲಾ, ಶರಣು ಶಿಂಧೆ, ಸಿದ್ದು ರಾಯಣ್ಣನವರ, ತಾಪಂ ಸದಸ್ಯ ಲಕ್ಕಪ್ಪ ಬಡಿಗೇರ, ತಾಪಂ ಸದಸ್ಯ ಎಂ.ಎನ್‌. ಕಿರಣರಾಜ, ಕಂದಾಯ ನಿರೀಕ್ಷಕ ಸುರೇಶ ಮ್ಯಾಗೇರಿ, ಚಂದ್ರಕಾಂತ ಸಿಂಗೆ, ಪ್ರದೀಪ ಗೌರ, ರಮೇಶ ಧರಣಾಕರ, ಎನ್‌.ಜಿ. ದೊಡಮನಿ, ಎಚ್.ಎ. ತಳ್ಳೋಳ್ಳಿ, ಕಾಶೀನಾಥ ತಳಕೇರಿ, ಭಾಸ್ಕರ ಪೂಜಾರಿ, ಚಂದ್ರಶೇಖರ ಕಡಕೋಳಕರ, ಶ್ರೀಕಾಂತ ಸೋವåಜಾಳ, ಗಾಲೀಬ ಯಂಟಮಾನ ಇದ್ದರು.

ಈ ವೇಳೆ ತಾಲೂಕಿನ ವಿವಿಧ ಗ್ರಾಮದ ಸುಮಾರು 200ಕ್ಕೂ ಹೆಚ್ಚು ಜನ ಬೌದ್ಧ ಧರ್ಮದ ದೀಕ್ಷೆ ಪಡೆದರು. ಕಾರ್ಯಕ್ರಮದ ನಂತರ ವಿವಿಧೆಡೆ 500ಕ್ಕೂ ಹೆಚ್ಚು ಸಸಿ ನೆಡಲಾಯಿತು.

ವಿನಾಯಕ ಗುಣಸಾಗರ ಸ್ವಾಗತಿಸಿದರು. ಪ್ರಕಾಶ ಗುಡಿಮನಿ ನಿರೂಪಿಸಿದರು. ಅಶೋಕ ಚಲವಾದಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next