Advertisement

ಸಿಂಡ್‌ ಬ್ಯಾಂಕ್‌, ಎಂಎಂಎನ್‌ಎಲ್‌ ನಿವೃತ್ತ ಅಧಿಕಾರಿ ಕೆ.ಎಲ್‌.ರಾವ್‌ ನಿಧನ

11:28 PM Nov 03, 2023 | Team Udayavani |

ಮಣಿಪಾಲ: ಸಿಂಡಿಕೇಟ್‌ ಬ್ಯಾಂಕ್‌ ಮತ್ತು ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ.,ನ ನಿವೃತ್ತ ಹಿರಿಯ ಅಧಿಕಾರಿ ಕೆ.ಎಲ್‌. ರಾವ್‌ (ಕಪೆì ಲಕ್ಷ್ಮೀನಾರಾಯಣ ರಾವ್‌) (84) ಅಸೌಖ್ಯದಿಂದ ನ. 3ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

Advertisement

ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಬಂಟ್ವಾಳ ತಾಲೂಕಿನ ಕಪೆì ಮೂಲದವರಾದ ಕೆ.ಎಲ್‌. ರಾವ್‌ ಅವರು ತಮ್ಮ ತಂದೆ ಕೃಷ್ಣಪ್ಪ ನಾಯಕ್‌ ಅವರು ಸ್ಥಾಪಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹತ್ತು ವರ್ಷ ಶಿಕ್ಷಕರಾಗಿದ್ದರು.

ಬಳಿಕ ಸಿಂಡಿಕೇಟ್‌ ಬ್ಯಾಂಕ್‌ ಉದ್ಯೋಗಿಯಾಗಿ ಸೇರಿದ ರಾವ್‌ ಅವರು ಮಣಿಪಾಲ, ಮಂಗಳೂರು, ಮುಂಬಯಿ, ವಿಜಯವಾಡ ಮೊದಲಾದೆಡೆ ಸೇವೆ ಸಲ್ಲಿಸಿ ಮುಖ್ಯ ಪ್ರಬಂಧಕ ಹುದ್ದೆಯಿಂದ 2000ರಲ್ಲಿ ನಿವೃತ್ತರಾದರು.

2001ರಿಂದ 2020ರ ವರೆಗೆ ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ.,ನ ನಿರ್ದೇಶಕರಾಗಿ (ಕಾರ್ಪೊರೇಟ್‌ ವ್ಯವಹಾರ) ಕಾರ್ಯನಿರ್ವಹಿಸಿದ್ದರು. ಅನಂತರ ಅವರು ಮಂಗಳೂರಿನಲ್ಲಿ ನೆಲೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next