Advertisement

ಸಿಂಪಲ್‌ ಸ್ಟಾರ್ಸ್

11:01 AM Dec 27, 2017 | Team Udayavani |

ಸ್ಟಾರ್‌ಗಳು ಆದಷ್ಟು ಸಿಂಪಲ್‌ ಆಗಿರಲು, ಜನರ ಜೊತೆ ಬೆರೆಯಲು, ತಮ್ಮ ಬಾಲ್ಯ ಸ್ನೇಹಿತರನ್ನು ಭೇಟಿಯಾಗಲು ಬಯಸುತ್ತಿರುತ್ತಾರೆ. ಸ್ಟಾರ್‌ಗಳ ಇಂತಹ ಆಸೆಗೆ ಹೆಚ್ಚು ಅವಕಾಶ ಸಿಗದಿದ್ದರೂ ಸಿಕ್ಕಾಗ ಅದನ್ನು ಬಳಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್‌ ನಟರು ಇತ್ತೀಚೆಗೆ ಸಿಂಪಲ್ಲಾಗಿದ್ದು, ಖುಷಿ ಅನುಭವಿಸಿದ್ದಾರೆ. ಅದು ಪುನೀತ್‌ ರಾಜಕುಮಾರ್‌ ಹಾಗೂ ದರ್ಶನ್‌. ಹೌದು, ಇತ್ತೀಚೆಗೆ ಬಳ್ಳಾರಿಯಲ್ಲಿ “ಟಗರು’ ಚಿತ್ರದ ಆಡಿಯೋ ಬಿಡುಗಡೆ ನಡೆದಿದೆ.

Advertisement

ಪುನೀತ್‌ ರಾಜಕುಮಾರ್‌ ತಮ್ಮ ಪಿಆರ್‌ಕೆ ಆಡಿಯೋ ಸಂಸ್ಥೆ ಮೂಲಕ “ಟಗರು’ ಚಿತ್ರದ ಹಾಡುಗಳನ್ನು ಹೊರತಂದಿದ್ದಾರೆ. ಆಡಿಯೋ ಬಿಡುಗಡೆ ಮುಗಿಸಿ ವಾಪಾಸ್‌ ಬರುವಾಗ ಪುನೀತ್ ರಾಜಕುಮಾರ್‌ ಬೀದಿ ಬದಿಯ ಅಂಗಡಿಯಲ್ಲಿ ತಿಂಡಿ ತಿಂದಿದ್ದಾರೆ. ಪುನೀತ್‌ ರಾಜಕುಮಾರ್‌ ಕಾರಿನಿಂದ ಇಳಿದು ತಮ್ಮ ಅಂಗಡಿಯಲ್ಲಿ ತಿಂಡಿ ತಿನ್ನುತ್ತಿದ್ದಾರೆಂಬುದನ್ನು ಒಂದು ಕ್ಷಣ ಅಲ್ಲಿನ ಮಂದಿಗೆ ಅರಗಿಸಿಕೊಳ್ಳುವುದು ಕೂಡಾ ಕಷ್ಟವಾಗಿತ್ತು.

ಆದರೆ, ಪುನೀತ್‌ ರಾಜಕುಮಾರ್‌ ಮಾತ್ರ ತಾನು ಸ್ಟಾರ್‌ ನಟ ಎಂಬ ಹಮ್ಮುಬಿಮ್ಮು ಇಲ್ಲದೇ ಆರಾಮವಾಗಿ ಎಲ್ಲರ ಜೊತೆ ಬೆರೆಯುತ್ತಾ ತಿಂಡಿ ತಿಂದರು. ಜೊತೆಗೆ ಆ ಅಂಗಡಿಯವರೊಂದಿಗೆ ಫೋಟೋ ಕೂಡಾ ತೆಗೆಸಿಕೊಂಡರು. ಇದು ಪುನೀತ್‌ ಕಥೆಯಾದರೆ ದರ್ಶನ್‌ ಕೂಡಾ ಮೈಸೂರಿನಲ್ಲಿ ತಮ್ಮ ಸ್ಕೂಲ್‌ ಫ್ರೆಂಡ್ಸ್‌ನ ಭೇಟಿಯಾಗಿದ್ದಾರೆ. ಮೈಸೂರಿನಲ್ಲಿ ತಾವು ಓದಿರುವ ಸ್ಕೂಲ್‌ಗೆ ಭೇಟಿ ನೀಡಿದ ದರ್ಶನ್‌ ತಮ್ಮ ಹಳೆಯ ನೆನಪುಗಳಿಗೆ ಜಾರಿದ್ದಾರೆ.

ಜೊತೆಗೆ ಆ ಸ್ಕೂಲ್‌ನಲ್ಲಿ ಓದಿದ ದರ್ಶನ್‌ ಅವರ ಅನೇಕ ಸ್ನೇಹಿತರು ಕೂಡಾ ಸೇರಿದ್ದು, ಎಲ್ಲರೊಂದಿಗೆ ದರ್ಶನ್‌ ಹರಟಿದ್ದಾರೆ. ಇಷ್ಟೇ ಅಲ್ಲದೇ, ದರ್ಶನ್‌ ಚಿತ್ರರಂಗದ ತಮ್ಮ ಸ್ನೇಹಿತರ ಜೊತೆಗೂಡಿ ಮೈಸೂರಿನಲ್ಲೇ ಕ್ರಿಸ್‌ಮಸ್‌ ಪಾರ್ಟಿ ಕೂಡಾ ಮಾಡಿದ್ದಾರೆ. ಸದ್ಯ ದರ್ಶನ್‌ ಅವರ “ಕುರುಕ್ಷೇತ್ರ’ ಚಿತ್ರೀಕರಣ ಮುಗಿಯುತ್ತಾ ಬಂದಿದ್ದು, ಅವರ ಹೊಸ ಚಿತ್ರ ಜನವರಿಯಿಂದ ಶುರುವಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next