Advertisement

ಪಡ್ಡೆಹುಲಿಗೆ ಬೆಳ್ಳಿ ಖಡ್ಗ

11:24 AM Apr 08, 2018 | Team Udayavani |

ನಿರ್ಮಾಪಕ ಕೆ. ಮಂಜು ಅವರ ಮಗ ಶ್ರೇಯಸ್‌ ಅಭಿನಯದ ಮೊದಲ ಚಿತ್ರ “ಪಡ್ಡೆಹುಲಿ’ ಚಿತ್ರದ ಮುಹೂರ್ತ ಈಗಾಗಲೇ ಮುಗಿದಿದೆ. ಚಿತ್ರದ ಚಿತ್ರೀಕರಣ ಏಪ್ರಿಲ್‌ 16ರಂದು ಶುರುವಾಗಲಿದ್ದು, ಈ ಮಧ್ಯೆ ಶ್ರೇಯಸ್‌ನ ಹುಟ್ಟುಹಬ್ಬದ ಸಲುವಾಗಿ ಚಿತ್ರದ ಪ್ರೋಮೋ ಸಾಂಗ್‌ ಬಿಡುಗಡೆ ಮಾಡಲಾಯಿತು.

Advertisement

ಇತ್ತೀಚೆಗೆ ಕಲಾವಿದರ ಸಂಘದ ಹೊಸ ಕಟ್ಟಡದಲ್ಲಿ ನಡೆದ ಸಮಾರಂಭದಲ್ಲಿ ಚಿತ್ರದ ಪ್ರೋಮೋ ಸಾಂಗ್‌ ಬಿಡುಗಡೆ ಮಾಡುವುದರ ಜೊತೆಗೆ ಶ್ರೇಯಸ್‌ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಹಾಡು ಬಿಡುಗಡೆ ಮಾಡುವುದಕ್ಕೆ ರಕ್ಷಿತ್‌ ಶೆಟ್ಟಿ ಬಂದಿದ್ದರು. ವಿಷಲ್‌ ಊದುವ ಮೂಲಕ ಹಾಡು ಬಿಡುಗಡೆ ಮಾಡಿದರು.

ಜೊತೆಗೆ ಹಿರಿಯ ನಿರ್ದೇಶಕ ಎಸ್‌.ಕೆ. ಭಗವಾನ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಹಿರಿಯ ನಿರ್ದೇಶಕ ಎಸ್‌.ಕೆ. ಭಗವಾನ್‌, ಇಂದ್ರಜಿತ್‌ ಲಂಕೇಶ್‌, ಎ.ಪಿ. ಅರ್ಜುನ್‌, ಎನ್‌.ಎಂ. ಸುರೇಶ್‌, ಎಂ.ಜಿ. ರಾಮಮೂರ್ತಿ, ಸೂರಪ್ಪ ಬಾಬು ಸೇರಿದಂತೆ ಹಲವರು ಇದ್ದರು. ಶ್ರೇಯಸ್‌ ಹುಟ್ಟುಹಬ್ಬದ ಸಲುವಾಗಿ, ಬೆಳ್ಳಿ ಖಡ್ಗ ನೀಡಿ ಸನ್ಮಾಸಲಾಯಿತು. ಈ ಚಿತ್ರವನ್ನು ರಮೇಶ್‌ ರೆಡ್ಡಿ ನಿರ್ಮಿಸಿದರೆ, ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next