Advertisement

Mangaluru ಶ್ರೀ ಕಾಶೀಮಠದಿಂದ ಅಯೋಧ್ಯೆಗೆ ಬೆಳ್ಳಿ ಪಲ್ಲಕ್ಕಿ

11:57 PM Feb 02, 2024 | Team Udayavani |

ಮಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ ಬೆಳ್ಳಿ ಪಲ್ಲಕ್ಕಿಯನ್ನು ಸಮರ್ಪಿಸಲಾಗುತ್ತಿದ್ದು, ಫೆ. 3ರಂದು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಪಲ್ಲಕಿಯ ಪುರ ಪ್ರವೇಶ ಕಾರ್ಯಕ್ರಮ ನಡೆಯಲಿದೆ.

Advertisement

ದೇವಸ್ಥಾನದ ಬಳಿಯಿಂದ ಸಂಜೆ 6ಕ್ಕೆ ಪಲ್ಲಕ್ಕಿಯ ಮೆರವಣಿಗೆ ಹೊರಟು ಡೊಂಗರಕೇರಿ ಮಹಾಮಾಯ ದೇವಸ್ಥಾನದ ಚಿತ್ರಾ ಜಂಕ್ಷನ್‌ ಬಳಿಯಿಂದ ಎಡಕ್ಕೆ ತಿರುಗಿ ಬಳಿಕ ಸ್ವದೇಶೀ ಸ್ಟೋರ್ಸ್‌ ಮೂಲಕ ರಥಬೀದಿ ತಲುಪಲಿದೆ.

ಬಳಿಕ ಶ್ರೀ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶೋಭಾ ಯಾತ್ರೆ ನಡೆಯಲಿದೆ. ದೇವಸ್ಥಾನಕ್ಕೆ ತಲುಪಿದ ಅನಂತರ ಶ್ರೀಗಳ ನೇತೃತ್ವದಲ್ಲಿ ದೇವರ ರಾತ್ರಿ ಪೂಜೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next