Advertisement

ಕಟಪಾಡಿ : ನಂದಿ ವಿಗ್ರಹಕ್ಕೆ ಬೆಳ್ಳಿಯ ಮುಖವಾಡ ಸಮರ್ಪಣೆ

03:15 AM Nov 21, 2018 | Team Udayavani |

ಕಟಪಾಡಿ: ಕಾರ್ಕಳ ಬೊಳ್ಳೆಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ  ಸುಮಾರು ಒಂದು ಲಕ್ಷದ ಐವತ್ತು ಸಾವಿರ ವೆಚ್ಚದಲ್ಲಿ ದಾನಿಗಳಿಂದ ಕೊಡಮಾಡಿದ ನಂದಿ ವಿಗ್ರಹದ ಬೆಳ್ಳಿಯ ಮುಖವಾಡ ಸೋಮವಾರ ಸಮರ್ಪಿಸಲಾಯಿತು. ಅನಂತರದಲ್ಲಿ 85ನೇ ವಾರ್ಷಿಕ  ಭಜನ ಸಪ್ತಾಹದ ಏಕಾಹ ಭಜನೆ ಆರಂಭಗೊಂಡಿತು. ಕ್ಷೇತ್ರದ ಮಹಾದಾನಿ ಸೂರು ಕರ್ಕೇರ ಅವರ ಸ್ಮರಣಾರ್ಥ ಸೋಮವಾರದ ಅನ್ನ ಸಂತರ್ಪಣೆಯು ಜರಗಿತು.

Advertisement

ಈ ಸಂದರ್ಭ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಅಶೋಕ್‌ ಎಂ. ಸುವರ್ಣ ,ಗೌರವ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್‌, ಮುಂಬಯಿ ಸಮಿತಿಯ ಅಧ್ಯಕ್ಷ ದಾಮೋದರ್‌ ಕುಂದರ್‌, ಶಾರದಾ ಸೂರು ಕರ್ಕೇರ, ಕತಾರ್‌ ಬಿಲ್ಲವ ಸಂಘದ ಅಧ್ಯಕ್ಷ ದಿವಾಕರ್‌, ಆಡಳಿತ ಮಂಡಳಿ ಸದಸ್ಯರಾದ ದಯಾನಂದ ಬಂಗೇರ, ರತ್ನಾಕರ ಅಂಚನ್‌ , ಮಾಧವ ಅಂಚನ್‌ ಇಂದುಶೇಖರ್‌, ದೇವಪ್ಪ ಪೂಜಾರಿ, ಕಟಪಾಡಿ ಶಂಕರ ಪೂಜಾರಿ, ರಮೇಶ್‌ ಕೋಟ್ಯಾನ್‌, ಲೀಲಾಧರ ಕೋಟ್ಯಾನ್‌,  ಜಿಲ್ಲಾ ಪಂಚಾಯತ್‌ ಸದಸ್ಯರಾದ ಗೀತಾಂಜಲಿ ಎಂ. ಸುವರ್ಣ, ಶಿಲ್ಪಾ ಜಿ. ಸುವರ್ಣ ಮುಂತಾದವರು ಉಪಸ್ಥಿತರಿದ್ದರು .

Advertisement

Udayavani is now on Telegram. Click here to join our channel and stay updated with the latest news.

Next