Advertisement

Sanatan ಧರ್ಮ ರಕ್ಷಣೆಗೆ ಸಿಖ್ ಸಮುದಾಯ ಸಾಕಷ್ಟು ಕೆಲಸ ಮಾಡಿದೆ: ರಾಜನಾಥ್ ಸಿಂಗ್

04:40 PM Oct 29, 2023 | Team Udayavani |

ಲಕ್ನೋ: ಸನಾತನ ಧರ್ಮವನ್ನು ರಕ್ಷಿಸಲು ಸಿಖ್ ಸಮುದಾಯ ಸಾಕಷ್ಟು ಕೆಲಸ ಮಾಡಿದೆ, ರಾಮ ಜನ್ಮಭೂಮಿ ಆಂದೋಲನವನ್ನು ಆರಂಭಿಸಿದವರು ಸಿಖ್ಖರು ಮತ್ತು ಅವರ ಕೊಡುಗೆಯನ್ನು ಯಾವುದೇ ಭಾರತೀಯರು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿಕೆ ನೀಡಿದ್ದಾರೆ.

Advertisement

ಲಕ್ನೋದ ಆಲಂಬಾಗ್ ಗುರುದ್ವಾರದಲ್ಲಿ ನಡೆದ ಗುರು ಗ್ರಂಥ ಸಾಹಿಬ್‌ನ ಪ್ರಕಾಶ್ ಉತ್ಸವದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ‘ನಾನು ಸರಕಾರಿ ದಾಖಲೆಯ ಪ್ರಕಾರ ಒಂದು ಪ್ರಮುಖ ಸಂಗತಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಎಫ್ಐಆರ್ ಪ್ರಕಾರ, 1858 ಡಿಸೆಂಬರ್ 1 ರಂದು,  ಗುರು ಗೋವಿಂದ್ ಸಿಂಗ್ ಅವರ ಸಿಖ್ಖರ ಗುಂಪು ಗೋಡೆಗಳ ಮೇಲೆ ಎಲ್ಲೆಡೆ ‘ರಾಮ್ ರಾಮ್’ ಎಂದು ಬರೆಯುವ ಮೂಲಕ ರಾಮ ಜನ್ಮಭೂಮಿ ಆಂದೋಲನವನ್ನು ಪ್ರಾರಂಭಿಸಿದರು” ಎಂದು ಹೇಳಿದರು.

ಈಗ ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ ಆದರೆ ಅವರ ಕರ್ತವ್ಯಗಳ ಬಗ್ಗೆ ಅಲ್ಲ.ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಶೇಕಡಾವಾರು ಪ್ರಮಾಣ ಇದ್ದರೆ, ಅದು ಸಿಖ್ ಸಮುದಾಯವಾಗಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next