Advertisement

ವಿಜ್ಞಾನಕ್ಕೆ ಆದ್ಯತೆ ಸಿಗಲಿ: ಲಲಿತಾ ನಾಯಕ್‌

11:31 AM Jan 02, 2017 | Team Udayavani |

ಬೆಂಗಳೂರು: ಮೌಡ್ಯಚಾರಣೆ, ಮೂಢನಂಬಿಕೆ ತೊಲಗಿಸಬೇಕೆಂಬ ಚಿಂತನೆಯ ದಿನಗಳಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕಾದ ಅಗತ್ಯವಿದೆ ಎಂದು ಮಾಜಿ ಸಚಿವೆ ಲಲಿತಾ ನಾಯಕ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ 2015ನೇ ಪ್ರಶಸ್ತಿ ಬಹುಮಾನ ಪ್ರದಾನ ಸಮಾರಂಭದಲ್ಲಿ ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ದೇಶದಲ್ಲಿ ಜಗತ್ತಿನಲ್ಲಿ ಮೌಡ್ಯಚಾರಣೆ ವಿಜೃಂಭಿಸುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರಜ್ಞಾವಂತ ನಾಗರಿಕರು ಅತ್ಯಂತ ಎಚ್ಚರಿಕೆ ಯಿಂದ ತಮ್ಮ ಕಾರ್ಯಚಟುವಟಿಕೆಗಳನ್ನು ನಡೆಸಬೇಕು ಎಂದರು.

ಬರಹಗಾರನಿಗೆ ಚೊಚ್ಚಲ ಪುಸ್ತಕ ಎನ್ನುವುದು ತಾಯಿಗೆ ಮೊದಲ ಹೆರಿಗೆಯಂತೆ. ಅಂತಹ ಸಂತೋಷವನ್ನು ಕನ್ನಡ ಪುಸ್ತಕ ಪ್ರಾಧಿಕಾರವು ಯುವ ಬರಹಗಾರರಿಗೆ ಉಂಟು ಮಾಡಿದ್ದಾರೆ. ಪುಸ್ತಕ ಎನ್ನುವುದು ಜ್ಞಾನ ಕೊಡುವ ತೊಟ್ಟಿಲು ಎಂದು ಭಾವಿಸುವ ಓದುಗ ಉತ್ತಮ ಜ್ಞಾನ ಪಡೆದು, ಮಾನವೀಯತೆ ಹಾಗೂ ಅಭಿವೃದ್ಧಿಯ ಪಥದಲ್ಲಿ ಸಾಗಬಲ್ಲ. ಬರಹಗಾರ ಜನತೆಗೆ ಏನು ಸಂದೇಶ ಕೊಡುತ್ತಿದ್ದೇವೆ. ಏನು ಬರೆದಿ ದ್ದೇವೆ, ನಾವು ಏನನ್ನು ಅಳವಡಿಸಿಕೊಂಡಿದ್ದೇವೆ ಎಂಬುದು ಮುಖ್ಯವಾಗುತ್ತದೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್‌ ಮಾತನಾಡಿ, ಯುವ ಜನತೆಯನ್ನು ಬರಹಗಾರರನ್ನಾಗಿ ಮಾಡಿ, ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಜೀವಂತಿಕೆಯನ್ನು ತರುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಪರಿಷತ್‌ನ ಜೊತೆಗೂಡಿ ರಾಜ್ಯದ 4 ಭಾಗಗಳಲ್ಲಿ ವಿಚಾರ ಸಂಕಿರಣಗಳನ್ನು ಆಯೋಜಿಸಲು ಕಾರ್ಯಯೋಜನೆಗಳನ್ನು ರೂಪಿಸ ಲಾಗುತ್ತಿದೆ ಎಂದು ಅವರು ಹೇಳಿದರು.

ಇಡೀ ದೇಶದಲ್ಲಿ ಮೊದಲ ಬಾರಿಗೆ ದಲಿತ ಮಹಿಳಾ ಸಾಹಿತ್ಯ ಸಮ್ಮೇಳವನ್ನು ಆಯೋಜಿ ಸಿದ್ದ ಕೀರ್ತಿ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಸಲ್ಲುತ್ತದೆ. ವಿದ್ಯಾರ್ಥಿಗಳಿಗೆ ಸಾಹಿತ್ಯದ ಅಭಿರುಚಿಯನ್ನು ಮೂಡಿಸುವ ಸಲುವಾಗಿ “ನನ್ನ ಮೆಚ್ಚಿನ ಪುಸ್ತಕ’ ಹಾಗೂ “ಪುಸ್ತಕ ಪ್ರೀತಿ ವಿದ್ಯಾರ್ಥಿ ಬಳಗ’ವನ್ನು ಎಂಬ ವಿನೂತನವಾದ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಯಾಗಿ ಮುನ್ನಡೆಸಿದ್ದೇವೆ ಎಂದರು.

Advertisement

ಪ್ರಶಸ್ತಿ ಪ್ರದಾನ: ಅನ್ವೇಷಣೆ ಪ್ರಕಾಶನ (ಅತ್ಯುತ್ತಮ ಪ್ರಕಾಶನ ಪ್ರಶಸ್ತಿ), ಡಾ.ಬಿ. ಶೇಷಾದ್ರಿ (ಡಾ.ಎಂ.ಎಂ.ಕಲಬರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ), ಶಶಿಕಲಾ ಬೆಳಗಲಿ (ಡಾ. 
ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ), ಡಾ.ಎಸ್‌.ಪಿ. ಯೋಗಣ್ಣ (ಡಾ. ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿ), ಎಂ.ಎಂ. ಪಬ್ಲಿಕೇಷನ್‌ (ಕನ್ನಡ ಪುಸ್ತಕ ಸೊಗಸು ಪ್ರಥಮ ಬಹುಮಾನ),

ಪಲ್ಲವ ಪ್ರಕಾಶನ (ದ್ವಿತೀಯ), ಅನಿಕೇತನ (ತೃತೀಯ ಬಹುಮಾನ) ಹಾಗೂ ಅನನ್ಯ ಪ್ರಕಾಶನದ ಮತ್ತೂಂದು ಮಹಾಭಾರತ ಕೃತಿಗೆ (ಮಕ್ಕಳ ಪುಸ್ತಕ) ಬಹುಮಾನ ನೀಡಲಾಯಿತು. ಬಿಡಿಮುತ್ತು ಕೃತಿಯ ಪುಟ ವಿನ್ಯಾಸಕ್ಕೆ ಯು.ಟಿ. ಸುರೇಶ್‌ ಅವರಿಗೆ ಪ್ರಥಮ ಹಾಗೂ “ಪೇಶಂಟ್‌ ಪಾರ್ಕಿಂಗ್‌’ ಕೃತಿಯ ಪುಟ ವಿನ್ಯಾಸಕ್ಕೆ ಸುಧಾಕರ್‌ ದರ್ಬೆ ಅವರಿಗೆ ದ್ವಿತೀಯ ಬಹುಮಾನ ದೊರಕಿದೆ.24 ಮಂದಿ ಯುವ ಬರಹಗಾರರ ಚೊಚ್ಚಲ ಕೃತಿಗಳಿಗೆ 2015ನೇ ಸಾಲಿನ ಪ್ರೋತ್ಸಾಹಧನ ನೀಡಲಾಯಿತು.

ಹಿರಿಯ ಸಂಶೋಧಕ ಡಾ.ಎಂ. ಕಲಬುರ್ಗಿ ಅವರು ಸಂಶೋಧನೆಗಳ ಮೂಲಕ ಸತ್ಯ ಶೋಧನೆಯಲ್ಲಿ ತೊಡಗಿದ್ದ ಮಹಾನ್‌ ಸಂತ. ಸತ್ಯದ ದಾರಿ ತೋರಲೆಂದೇ ತಮ್ಮ ಬದುಕನ್ನು ಮುಡುಪಾಗಿಟ್ಟ ಮಹಾನ್‌ ಸಾಧಕ. ಅವರ ಹೆಸರಿನ ಈ “ಡಾ.ಎಂ.ಎಂ. ಕಲಬುರ್ಗಿ’ ಪ್ರಶಸ್ತಿ ಬಂದಿರುವುದು “ನೊಬೆಲ್‌’ ಪ್ರಶಸ್ತಿ ಬಂದಷ್ಟೇ ಸಂತಸವಾಗಿದೆ.
-ಬಿ.ಶೇಷಾದ್ರಿ, ಅರ್ಥಶಾಸ್ತ್ರಜ್ಞ, ಬಳ್ಳಾರಿ

Advertisement

Udayavani is now on Telegram. Click here to join our channel and stay updated with the latest news.

Next