Advertisement

ನರೇಗಾ ಕೆಲಸಕ್ಕಾಗಿ ತಾಪಂ ಕಚೇರಿಗೆ ಮುತ್ತಿಗೆ

01:07 PM Mar 10, 2022 | Team Udayavani |

ಲಿಂಗಸುಗೂರು: ನರೇಗಾದಡಿ ಉದ್ಯೋಗ ನೀಡುವಂತೆ ಆಗ್ರಹಿಸಿ ತಾಲೂಕಿನ ಹೊನ್ನಹಳ್ಳಿ ಗ್ರಾಮದ ಕೂಲಿಕಾರರು ಬುಧವಾರ ತಾಪಂ ಕಚೇರಿಗೆ ಮುತ್ತಿಗೆ ಹಾಕಿದರು.

Advertisement

ನರೇಗಾದಡಿ ಕೆಲಸ ನೀಡುವಂತೆ ಹೊನ್ನಹಳ್ಳಿ ಗ್ರಾಪಂ ಕಚೇರಿಗೆ ಅಲೆದಾಡಿ ಸಾಕಾಗಿದೆ. ಆದರೆ ನಮಗೆ ಕೆಲಸ ನೀಡದೇ ವಿವಿಧ ನೆಪಗಳನ್ನು ಹೇಳಿ ಸಾಗಿ ಹಾಕುತ್ತಿದ್ದಾರೆ ವಿನಃ ಕೆಲಸ ನೀಡುತ್ತಿಲ್ಲ. ನಾವು ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸಲ್ಲಿಸಿದವರಿಗೆ ಕೆಲಸ ನೀಡಿ ನಮಗೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ನಮಗೆ ಕೆಲಸ ನೀಡುವಂತೆ ಕೂಲಿಕಾರರು ಆಗ್ರಹಿಸಿದರು.

ಕೂಲಿಕಾರರಾದ ದುರಗಪ್ಪ, ನೀಲಮ್ಮ, ಅಮರಪ್ಪ, ಲಕ್ಷ್ಮೀ, ಶರಣಬಸವ, ಸುನೀತಾ, ಭೀಮವ್ವ, ತಮ್ಮಣ್ಣ, ಅಮರೇಶ, ಅಮರಪ್ಪ ಹಾಗೂ ಇನ್ನಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next