Advertisement

ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ರಕ್ಷಿತಾ ಖಂಡನೆ

02:45 PM Nov 12, 2020 | sudhir |

ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ಶಾಸಕರಾದ ಸಿದ್ದು ಸವದಿ ಅವರು ಮಹಿಳಾ ಜನಪ್ರತಿನಿಧಿಗಳನ್ನು ನೂಕಿ ಅವಮಾನ ಮಾಡಿರುವ ಘಟನೆಯನ್ನು ಮಹಿಳಾ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ತೀವ್ರವಾಗಿ ಖಂಡಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಚಿವ ಸ್ಥಾನಮಾನದ ನಿಗಮ ಮಂಡಳಿ ಅಧ್ಯಕ್ಷರೂ ಆಗಿರುವ ಸವದಿ ಅವರು, ಮಹಿಳಾ ಸದಸ್ಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದು ತಿಳಿಯಬೇಕು. ತಮ್ಮ ಪಕ್ಷದ ಸದಸ್ಯರು ಬೇರೆ ಪಕ್ಷದ ಕಡೆಗೆ ಹೋಗಿದ್ದರೆ ಅವರಿಗೆ ವಿಪ್‌ ನೀಡಿ, ಕ್ರಮ ಕೈಗೊಳ್ಳುವ ಅವಕಾಶ ಸಂವಿಧಾನ ಬದ್ಧವಾಗಿ ಇದೆ. ಆದರೆ, ತಾವೇ ಪುರಸಭೆ ಕಚೇರಿಯ ಗೇಟ್‌ ಮುಂದೆ ನಿಂತು, ಮಹಿಳಾ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ದೌರ್ಜನ್ಯ ನಡೆಸಿರುವುದು, ಕಾನೂನು ವಿರೋಧಿ ಕಾರ್ಯ ಎಂದು ಹೇಳಿದ್ದಾರೆ.

ಅಲ್ಲದೇ ಈ ಘಟನೆಯನ್ನು ರಾಜ್ಯ ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಮೂವರು ಮಹಿಳಾ ಜನಪ್ರತಿನಿಧಿಗಳಿಗೇ ಈ ರೀತಿಯ ದೌರ್ಜನ್ಯ ಅವಮಾನ ನಡೆದಿದೆ ಅಂದರೆ, ಸಾಮಾನ್ಯ ಮಹಿಳೆಯರ ಪರಿಸ್ಥಿತಿ ಏನು. ಮಹಿಳಾ ಆಯೋಗ ಈ ಘಟನೆಗೆ ಸಂಬಂ ಧಿಸಿದಂತೆ ದೂರು ದಾಖಲಿಸಿಕೊಂಡು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next