Advertisement

“ಸಿದ್ದು ಸಾರ್ವಜನಿಕವಾಗಿ ಕ್ಷಮೆಯಾಚಿಸಲಿ’

11:17 PM Oct 26, 2019 | Lakshmi GovindaRaju |

ಶಿವಮೊಗ್ಗ: ವಿಧಾನಸಭಾಧ್ಯಕ್ಷರ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರು ಸಾರ್ವಜನಿಕ ವಾಗಿ ಕ್ಷಮೆಯಾಚಿಸಬೇಕು. ಇಲ್ಲವೇ ಸಭಾಧ್ಯಕ್ಷರು ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಆಗ್ರಹಿಸಿದರು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಿರಿಯ ರಾಜಕಾರಣಿ. ಸಿಎಂ ಆಗಿದ್ದವರು. ಅವರು ಕೂಡ ಸಾಂವಿಧಾನಿಕ ಹುದ್ದೆಯಲ್ಲೇ ಇದ್ದಾರೆ. ಹೀಗಿದ್ದರೂ ಅಧ್ಯಕ್ಷರ ಕುರಿತು ಏಕವಚನದಲ್ಲಿ “ಅವನ್ಯಾವನೋ’ ಎಂದು ಕೀಳುಮಟ್ಟದಲ್ಲಿ ಹೇಳಿದ್ದಾರೆ. ಇದು ವ್ಯಕ್ತಿಗಾದ ಅವಮಾನವಲ್ಲ. ಸಂವಿಧಾನ ಪೀಠಕ್ಕೆ ಆದ ಅವಮಾನ. ಅವರ ವಿರುದ್ಧ ಹಕ್ಕುಚ್ಯುತಿ ಮಂಡನೆಯಾಗಲೇಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next