Advertisement

ತಮ್ಮ ಫೋಟೋ ಹಾಕಿ ‘RIP’ ಹೇಳಿದ್ದಕ್ಕೆ ನಟ ಸಿದ್ದಾರ್ಥ ಪ್ರತಿಕ್ರಿಯೆ ಏನು ?

09:11 PM Sep 02, 2021 | Team Udayavani |

ಚೆನ್ನೈ : ತಮ್ಮ ಫೋಟೋ ಹಾಕಿ RIP ಹೇಳಿದ ವ್ಯಕ್ತಿಗೆ ನಟ ಸಿದ್ಧಾರ್ಥ್ ಪ್ರತಿಕ್ರಿಯಿಸಿದ್ದು, ಇದು ಉದ್ದೇಶಿತ ದ್ವೇಷ ಹಾಗೂ ಕಿರುಕುಳ. ಇಂದು ನಾವು ಯಾವ ಮಟ್ಟಕ್ಕೆ ಇಳಿದಿದ್ದೇವೆ ನೋಡಿ ಎಂದಿದ್ದಾರೆ.

Advertisement

ಇಂದು (ಸೆ.02) ಹಿಂದಿ ಬಿಗ್ ಬಾಸ್ ವಿನ್ನರ್ ಹಾಗೂ ಕಿರುತೆರೆಯ ನಟ ಸಿದ್ಧಾರ್ಥ್ ಶುಕ್ಲಾ ಅವರು ಹೃದಯಘಾತದಿಂದ ಸಾವನ್ನಪ್ಪಿದರು. ಈ ನಟನ ಸಾವಿಗೆ ಎಲ್ಲೆಡೆ ಸಂತಾಪ ವ್ಯಕ್ತವಾಯಿತು. ಇದೇ ವೇಳೆ ವ್ಯಕ್ತಿಯೋರ್ವ ಟ್ವಿಟರ್ ನಲ್ಲಿ ತಮಿಳು ನಟ ಸಿದ್ಧಾರ್ಥ್ ಅವರ ಫೋಟೊ ಹಾಕಿ RIP ಅಂತಾ ಕಾಮೆಂಟ್ ಮಾಡಿದ್ದಾನೆ. ಸೆನ್‍ಸೆ ಎಕ್ಸ್ ಹೆಸರಿನಲ್ಲಿರುವ ಟ್ವಿಟರ್ ಖಾತೆಯಲ್ಲಿ ಸಿದ್ಧಾರ್ಥ್‍ ಬದುಕಿದ್ದಾಗಲೇ ಸಂತಾಪ ಸೂಚಿಸಲಾಗಿದೆ.

ತಮಗೆ ಸಂತಾಪ ಸೂಚಿಸಿರುವ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸಿದ್ಧಾರ್ಥ್ ಅವರು, ಈ ಟ್ವೀಟ್ ಹಾಗೂ ಇದಕ್ಕೆ ಬಂದಂತಹ ಪ್ರತಿಕ್ರಿಯೆಗಳು ಪ್ರಸ್ತುತ ದಿನಗಳಲ್ಲಿ ನಿಮಗೆ ಅಚ್ಚರಿಯನ್ನುಂಟು ಮಾಡಬಾರದು. ಇದು ಉದ್ದೇಶಿತವಾದ ದ್ವೇಷ ಹಾಗೂ ಕಿರುಕುಳ. ನಾವು ಇಂದು ಯಾವ ಮಟ್ಟಕ್ಕೆ ಇಳಿದಿದ್ದೇವೆ ಎಂದು ಪ್ರಶ್ನಿಸಿದ್ದಾರೆ.

ಇನ್ನು ಸಿದ್ದಾರ್ಥ್ ಅವರು ಕೇಂದ್ರ ಸರ್ಕಾರ ವಿರುದ್ಧ ಕೆಲವೊಂದು ಸಾರಿ ಟೀಕೆ ಮಾಡಿದ್ದುಂಟು. ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಈ ನಟ ಮಾತನಾಡಿದ್ದರು. ಅಂದಿನಿಂದ ಇವರ ಬಗ್ಗೆ ಕೆಲವೊಂದಿಷ್ಟು ಜನರು ಆಕ್ರೋಶ ಹೊರ ಹಾಕಿದ್ದುಂಟು.

Advertisement
Advertisement

Udayavani is now on Telegram. Click here to join our channel and stay updated with the latest news.

Next