Advertisement

ಸಿದ್ದಾರ್ಥ್ ದೇವೇಂದರ್‌ ಸಿಂಗ್‌ ಕೊಲೆ ಪ್ರಕರಣ : ಪ್ರಮುಖ ಆರೋಪಿ ತಿರುಪತಿಯಲ್ಲಿ ಆತ್ಮಹತ್ಯೆ

01:10 AM Feb 03, 2021 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿ| ಧರಂಸಿಂಗ್‌ ಅವರ ಸಂಬಂಧಿ ಸಿದ್ದಾರ್ಥ್ ದೇವೇಂದರ್‌ ಸಿಂಗ್‌ (28) ಅವರನ್ನು ಹತ್ಯೆಗೈದ ಪ್ರಮುಖ ಆರೋಪಿ ಶ್ಯಾಮ್‌ ಸುಂದರ್‌ ರೆಡ್ಡಿ (28) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Advertisement

ಸಾಫ್ಟ್ವೇರ್‌ ಎಂಜಿನಿಯರ್‌ ಆಗಿರುವ ಶ್ಯಾಮ್‌ ಸುಂದರ್‌ ರೆಡ್ಡಿ ಮತ್ತು ಈಗಾಗಲೇ ಬಂಧನಕ್ಕೊಳಗಾಗಿರುವ ಈತನ್ನ ಸಹಚರ ವಿನೋದ್‌ ಜತೆ ಸೇರಿಕೊಂಡು ಜ.19ರಂದು ಸಿದ್ದಾರ್ಥ್ ದೇವೇಂದರ್‌ ಸಿಂಗ್‌ರನ್ನು ಅಪಹರಿಸಿ ಹತ್ಯೆಗೈದು ತಿರುಪತಿ ಸಮೀಪದ ನೆಲ್ಲೂರು ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದರು.

ಈಗಾಗಲೇ ಬಂಧನಕ್ಕೊಳಗಾಗಿರುವ ವಿನೋದ್‌ ಮತ್ತು ಆತ್ಮಹತ್ಯೆ ಮಾಡಿಕೊಂಡ ಶ್ಯಾಮ್‌ಸುಂದರ್‌ ರೆಡ್ಡಿ ಜ.19ರಂದು ಕೃತ್ಯ ಎಸಗಿದ ಬಳಿಕ ತಿರುಪತಿಗೆ ಹೋಗಿದ್ದರು. ಪೊಲೀಸರು ಬಂಧಿಸಬಹುದು ಎಂಬ ಆತಂಕದಿಂದ ಇಬ್ಬರೂ ಚರ್ಚಿಸಿಯೇ ಆತ್ಮಹತ್ಯೆಗೆ ತೀರ್ಮಾನಿಸಿದ್ದರು. ಶ್ಯಾಮ್‌ಸುಂದರ್‌ ಜ.28ರಂದೇ ತಿರುಪತಿ ಶ್ರೀನಿವಾಸಂ ತಾಳ್ಲಪಾಕ ಕೆರೆಯ ಬಳಿಯ ಮುಳ್ಳಿನ ಕಂಟಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೋಮವಾರ ಶ್ಯಾಮ್‌ಸುಂದರ್‌ನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ವಿನೋದ್‌ ಕೂಡ ಆತ್ಮಹತ್ಯೆಗೆ ಮುಂದಾಗಿದ್ದು, ಆತನನ್ನು ಪೊಲೀಸರು ರಕ್ಷಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next