Advertisement

BSY ಇನ್ನೂ ಸ್ವಲ್ಪ ಸಮಯ ಸಿಎಂ ಮುಂದುವರಿಯುವ ಲಕ್ಷಣ ಕಾಣುತ್ತಿದೆ : ಸಿದ್ದರಾಮಯ್ಯ

02:31 PM Jan 13, 2021 | Team Udayavani |

ಮೈಸೂರು : ರಾಜ್ಯದಲ್ಲಿ ಮಂತ್ರಿ ಮಂಡಲ ವಿಸ್ತರಣೆ ಮಾಡಿರುವುದರಿಂದಾಗಿ ಬಿಎಸ್ ವೈ ಇನ್ನು ಸ್ವಲ್ಪ ಸಮಯ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂಬ ಹೇಳಿಕೆ ನೀಡುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಬದಲಾವಣೆ ಆಗುತ್ತೆ ಎಂಬ ಹೇಳಿಕೆಯನ್ನು ಬದಲಾಯಿಸಿಕೊಂಡಿದ್ದಾರೆ.

Advertisement

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗ ಸಂಪುಟ ವಿಸ್ತರಣೆ ಆಗಿರೋದು ನೋಡಿದ್ರೆ ಇನ್ನು ಸ್ವಲ್ಪ ದಿನ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವ ಲಕ್ಷಣ ಕಂಡುಬರುತ್ತಿದೆ ಎಂದ ಅವರು ನಮಗಿದ್ದ ಮಾಹಿತಿ ಪ್ರಕಾರ ಹೈಕಮಾಂಡ್ ಯಡಿಯೂರಪ್ಪನವರ ಬಳಿ ರಾಜಿನಾಮೆಯನ್ನು ಕೇಳಿದೆ ಆದರೆ ಬಿಎಸ್ ವೈ ಸಂಪುಟ ವಿಸ್ತರಣೆ ಮಾಡಿ ಬಳಿಕ ರಾಜಿನಾಮೆಯನ್ನು ಕೊಡ್ತೀನಿ ಎಂದು ಹೇಳಿರಬಹುದು ಹಾಗಾಗಿ ಇನ್ನು ಸ್ವಲ್ಪ ದಿನ ಮುಖ್ಯಮಂತ್ರಿಯಾಗಿ ಮುಂದುವರೆಯುವ ಲಕ್ಷಣ ಇದೆ ಎಂದಿದ್ದಾರೆ.

ನನ್ನ ಬಜೆಟ್ ಸ್ಟೈಲೇ ಬೇರೆ :
ಯಡಿಯೂರಪ್ಪ ಬಜೆಟ್ ಮಂಡಿಸಲೇಬೇಕು ಇಲ್ಲದಿದ್ದಲ್ಲಿ ಮಾರ್ಚ್ ನಂತರ ಒಂದು ರೂಪಾಯಿಯೂ ಖರ್ಚು ಮಾಡೋಕೆ ಆಗೋದಿಲ್ಲ ಇವರಿಗೆ ಎಂದಿದ್ದಾರೆ. ನನ್ನ ಬಜೆಟ್ ಸ್ಟೈಲ್ ಬೇರೆ ಇತ್ತು, ಇವರ ಬಜೆಟ್ ಸ್ಟೈಲ್ ಬೇರೆ ಇದೆ ಈಗ ಮೀಟಿಂಗ್ ಮಾಡ್ತಿದ್ದೀವಿ ಅಂತ ಹೇಳಿದ್ದಾರೆ ನೋಡೋಣ ಏನ್ ಮಾಡ್ತಾರೆ ಅಂತ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next