Advertisement

ಇಂದು ಸಿದ್ದು ಸಂಧಾನ

01:08 AM Mar 21, 2019 | |

ಬೆಂಗಳೂರು: ಮೈತ್ರಿಯಿಂದ ಮುನಿಸಿ ಕೊಂಡಿರುವ ಹಾಸನ ಜಿಲ್ಲಾ ಮುಖಂಡರ ಆಕ್ರೋಶವನ್ನು ತಣಿಸಲು ಸಿದ್ದರಾಮಯ್ಯ ರೇವಣ್ಣ ಅವರೊಂದಿಗೆ ಜಿಲ್ಲಾ ಮುಖಂಡರ ಸಭೆ ಕರೆದಿದ್ದಾರೆ. ಬುಧವಾರ ಕೈಮುಖಂಡರು ನೀಡಿದ ದೂರುಗಳ ಶಮನ ಮಾಡಲು ಕಸರತ್ತು ನಡೆಸಿದ್ದಾರೆ. ಹಾಸನದಲ್ಲಿ ಜೆಡಿಎಸ್‌ನಿಂದ ಪಕ್ಷದ ಕಾರ್ಯಕರ್ತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನನಗೂ ಅರ್ಥವಾಗುತ್ತಿದೆ. ಲೋಕಸಭೆ ಚುನಾವಣೆವರೆಗೂ ಎಲ್ಲವನ್ನೂ ಸಹಿಸಿ ಕೊಳ್ಳಬೇಕಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

Advertisement

ಮಂಡ್ಯ ಸಂಬಂಧಿಕರಿಗೆ ಸಂದೇಶ : ದೇವೇಗೌಡರು ಮಂಡ್ಯದಲ್ಲಿಯೂ ತಮ್ಮ ಕುಟುಂಬ ರಾಜಕಾರಣ ಮುಂದುವರೆಸಿ ರುವುದಕ್ಕೆ ಆಕ್ರೋಶ ಗೊಂಡಿರುವ ಹಾಸನದ ಕಾಂಗ್ರೆಸ್‌ ಕಾರ್ಯಕರ್ತರು ಜೆಡಿಎಸ್‌ ಅಭ್ಯರ್ಥಿ ಸೋಲಿಸಲು ನೆಂಟರು, ಸಂಬಂಧಿಕರು, ಸ್ನೇಹಿತರ ಮೂಲಕ ಸಂದೇಶ ರವಾನಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದಲ್ಲಿ ಪ್ರಜ್ವಲ್‌, ಮಂಡ್ಯದಲ್ಲಿ ನಿಖೀಲ್‌ ಸ್ಪರ್ಧೆ ವಿರುದ್ಧ  ಪ್ರಚಾರಕ್ಕೆ ಮುಂದಾಗಿರುವ ಕಾಂಗ್ರೆಸ್‌ನ ಕೆಲವು ಜಿಲ್ಲಾ ಕಾರ್ಯಕರ್ತರು ಮಂಡ್ಯದಲ್ಲಿ ನಿಖೀಲ್‌ ಗೆ ಮತ ನೀಡದಂತೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next