Advertisement

ನಾನು ಹರಕೆ ಕೊಟ್ಟ ಸೀರೆಯನ್ನೇ ಉಡಿಸಿ; ಸಿಎಂ ಪತ್ನಿ ಪಟ್ಟು 

11:58 AM Sep 30, 2017 | Team Udayavani |

ಮೈಸೂರು:ವಿಶ್ವವಿಖ್ಯಾತ ದಸರಾದ ಜಂಬೂ ಸವಾರಿ ಮೆರವಣಿಗೆಯ ಅಂಬಾರಿಯಲ್ಲಿ ವಿರಾಜಮಾನವಾಗುವ ಚಾಮುಂಡೇಶ್ವರಿ ದೇವಿಗೆ ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ರೇಷ್ಮೆ ಸೀರೆಯೊಂದನ್ನು ಹರಕೆಯ ರೂಪದಲ್ಲಿ ನೀಡಿದ್ದು, ಅವರ ಮನವಿಯ ಮೇರೆಗೆ ಆ ಸೀರೆಯನ್ನೇ ದೇವಿ ಮೂರ್ತಿಗೆ ಉಡಿಸಲಾಗಿದೆ . 

Advertisement

ಕಳೆದ 15 ವರ್ಷಗಳಿಂದ ಈ ಉತ್ಸವ ಮೂರ್ತಿಗೆ ಬೆಂಗಳೂರಿನ ಬಳೆಪೇಟೆಯ ಉದ್ಯಮಿಯೊಬ್ಬರು ನೀಡುತ್ತಿದ್ದ ಸೀರೆಯಲ್ಲಿ ಅಲಂಕರಿಸಲಾಗುತ್ತಿತ್ತು. ಈ ಬಾರಿ ಸಿಎಂ ಪತ್ನಿ, ಪತಿಯ ಒಳಿತಿಗೆ ಪ್ರಾರ್ಥಿಸಿ ಸೀರೆಯನ್ನು ನೀಡಿದ್ದು, ಅದನ್ನೇ ಉಡಿಸಬೇಕೆಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ . 

ಆಕರ್ಷಕ ಮೂರ್ತಿ ನೀಲ ವರ್ಣದ ಸೀರೆಯಲ್ಲಿ ಕಂಗೊಳಿಸುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next