Advertisement

ಬಳ್ಳಾರಿಯಲ್ಲಿ ಕನ್ನಡದ ಕಲಹ;ರಾಮುಲುಗೆ ಸಿದ್ದರಾಮಯ್ಯ ಕಠಿಣ ಪ್ರಶ್ನೆ! 

05:37 PM Oct 31, 2018 | Team Udayavani |

ಬಳ್ಳಾರಿ: ಉಪಚುನಾವಣಾ ಪ್ರಚಾರದ ಕಾವು ಏರಿರುವ ವೇಳೆಯಲ್ಲಿ  ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ಶ್ರೀರಾಮುಲು ನಡುವೆ ಕನ್ನಡದ ಗಟ್ಟಿತನದ ಕುರಿತಾಗಿ ಸವಾಲುಗಳ ವಿನಿಮಯ ಆಗಿದೆ.

Advertisement

ಶ್ರೀರಾಮುಲುಗೆ ಸರಿಯಾಗಿ ಕನ್ನಡವೇ ಬರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಪ್ರತಿಯಾಗಿ  ಅಕ್ಟೋಬರ್‌ 27 ರಂದು  ಪ್ರಚಾರ ಸಭೆಯಲ್ಲಿ  ಕಿಡಿ ಕಾರಿದ್ದ ಶ್ರೀರಾಮುಲು ನನಗೆ ಕನ್ನಡ ಬರುತ್ತದೆ. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಪಕ್ಷ ಅಂತ ಹೇಳಲು ಬರುವುದಿಲ್ಲ. ಅವರಿಗೆ ಲಕ್ಷ ಅನ್ನಲೂ ಬರುವುದಿಲ್ಲ ಎಂದಿದ್ದರು. 

ಬುಧವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ಸಿದ್ದರಾಮಯ್ಯ ನನಗೆ ಪಕ್ಷ ಅನ್ನಲು ಬರುತ್ತದೆ. ಕ್ಷ ಅನ್ನುವುದು ಸ್ವತಂತ್ರ ಪದವ ಇಲ್ಲ, ಸಂಯುಕ್ತ ಪದವ ಅನ್ನುವುದನ್ನು ಶ್ರೀರಾಮುಲು ಹೇಳಲಿ ಎಂದು ಸಾವಲೆಸೆದರು. 

ನನಗೆ ಕನ್ನಡ ಹೇಳಿ ಕೊಡಲು ಬರುತ್ತಾರೆ. ಅವರಿಗೆ ಹೃಸ್ವ ಸ್ವರ,ದೀರ್ಘ, ವ್ಯಂಜನ, ಅಲ್ಪ ಪ್ರಾಣ, ಮಹಾಪ್ರಾಣ ಏನಾದರು ಗೊತ್ತಿದೆಯಾ  ಎಂದು ಪ್ರಶ್ನಿಸಿದರು. 

ಯಡಿಯೂರಪ್ಪಗೆ 3 ನೇ ಮಹಡಿ ಕಾಣುತ್ತಿದೆ!
ಯಡಿಯೂರಪ್ಪ  ಅವರಿಗೆ ಮಲಗಿದ ತಕ್ಷಣ ವಿಧಾನಸೌಧದ ಮೂರನೇ ಮಹಡಿ ಕಾಣುತ್ತದೆ ಎಂದು ಲೇವಡಿ ಮಾಡಿದರು. 

Advertisement

ಶೋಭಾ ಕರಂದ್ಲಾಜೆ ಆಗಲಿ ಯಡಿಯೂರಪ್ಪ ಅವರಾಗಲಿ ನೂರು ಬಾರಿ ಹೇಳಿದರು ನಮ್ಮ ಸರ್ಕಾರ ಪತನವಾಗುವುದಿಲ್ಲ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next