Advertisement

ಬಿಜೆಪಿ ಸೇರಿರೋದ್ರಿಂದ ಹತಾಶರಾಗಿ ಮಾತನ್ನಾಡ್ತಿದ್ದಾರೆ: ಸಿದ್ದರಾಮಯ್ಯ ಟಾಂಗ್ ನೀಡಿದ್ಯಾರಿಗೆ?

10:54 AM Dec 13, 2019 | Team Udayavani |

ಮೈಸೂರು: ಸಿದ್ದರಾಮಯ್ಯ ವೈಟ್ ವಾಶ್ ಆಗ್ತಾರೆ ಎಂಬ ಶ್ರೀನಿವಾಸ್ ಪ್ರಸಾದ್ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ,  ಅವರು ಹೋದ ಕಡೆಯಲ್ಲಾ ಗಲಾಟೆ ಆಗುತ್ತಿದೆ. ಆದ್ರೂ ಶ್ರೀನಿವಾಸ್ ಪ್ರಸಾದ್ ಗೆ ಇನ್ನೂ ಬುದ್ದಿ ಬಂದಿಲ್ಲ ಎಂದು ತಿರುಗೇಟು ನೀಡಿದರು.

Advertisement

ಮೈಸೂರಿನಲ್ಲಿ ಮಾತನಾಡಿದ ಅವರು, ಶ್ರೀನಿವಾಸ ಪ್ರಸಾದ್ ಬಿಜೆಪಿಗೆ ಸೇರಿದ ಮೇಲೆ ನಂಜನಗೂಡಲ್ಲಿ ಸೋತರು. ಬಿಜೆಪಿ ಸೇರಿರೋದ್ರಿಂದ ಹತಾಶರಾಗಿ ಮಾತಗಳನ್ನ ಆಡ್ತಾ ಇದ್ದಾರೆ. ಇವಕ್ಕೆಲ್ಲ ಉತ್ತರ ನೀಡೋಕ್ ಆಗಲ್ಲ ಎಂದರು.

ಬಿಜೆಪಿಯಷ್ಟೆ ಜೆಡಿಎಸ್ ಸಹ ನಮಗೆ ರಾಜಕೀಯ ವೈರಿ. ನಾವು ಈ ಚುನಾವಣೆಯನ್ನ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ದೇವೆ. ಈ ಎರಡು ಪಕ್ಷಗಳು ಈ ಉಪಚುನಾವಣೆಯಲ್ಲಿ ಒಂದು ಕ್ಷೇತ್ರ ಗೆಲ್ಲಲ್ಲ ಎಂದು ಜೆಡಿಎಸ್ ಕಾಂಗ್ರೆಸ್ ಒಳ ಒಪ್ಪಂದ ವಿಚಾರವನ್ನು ತಳ್ಳಿ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next