Advertisement

ಲಾಕ್ ಡೌನ್ ಗೆ ವಿರೋಧವಿಲ್ಲ, ಆದರೆ ಮೋದಿ ಮಾಡಿದ್ದು ರಾಜಕೀಯ ಭಾಷಣ: ಸಿದ್ದರಾಮಯ್ಯ

01:10 PM Apr 14, 2020 | keerthan |

ಬೆಂಗಳೂರು: ಲಾಕ್ ಡೌನ್ ಮುಂದುವರೆಸಿದ್ದಕ್ಕೆ ವಿರೋಧ ಮಾಡಲ್ಲ. ಆದರೆ ಅವರ ಭಾಷಣ ರಾಜಕೀಯ ಭಾಷಣವಾಗಿದೆ. ಜನರಿಗೆ ತೊಂದರೆ ಆಗುತ್ತಿದೆ. ಆದರೆ ಜೀವ ಮುಖ್ಯ ಹೀಗಾಗಿ ಲಾಕ್ ಡೌನ್ ಅಗತ್ಯ ಇದೆ ಎಂದು ಸಿದ್ದರಾಮಯ್ಯ ಹೇಳಿದರು.

Advertisement

ಪ್ರಧಾನಿ ಮೋದಿಯವರ ಭಾಷಣದ ಕುರಿತಾಗಿ ಮಾತನಾಡಿದ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ನಮ್ಮ ಪಕ್ಷ ಜನರ ಪರ ಇದೆ. ರೈತರಿಗೆ ನಷ್ಟ ಆಗ್ತಿದೆ. ಸರ್ಕಾರಕ್ಕೆ ಅದರ ಬಗ್ಗೆ ಕಾಳಜಿ ಇಲ್ಲ. ನಾವು ಕೊಟ್ಟ ಸಲಹೆ ಸಹ ಸ್ವೀಕರಿಸಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರ ನಮ್ಮ ಸಲಹೆ ತೆಗೆದುಕೊಂಡಿಲ್ಲ ಎಂದರು.

ಲಾಕ್ ಡೌನ್ ಸಂಪೂರ್ಣವಾಗಿ ಯಶಸ್ವಿ ಮಾಡುವ ಕೆಲಸ ಸಹ ಮಾಡಲಿಲ್ಲ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ. ಅಬಕಾರಿ ಮತ್ತು ನೋಂದಣಿ ನಿಂತಿದೆ. ಈ ಸಂದರ್ಭದಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡಿಕರಣ ಕಷ್ಟ. ಆದರೆ ರಾಜ್ಯ ಸರ್ಕಾರ ಅನಗತ್ಯ ಖರ್ಚು ಮಾಡ್ತಿದೆ ಎಂದರು.

ನಿಗಮ ಮತ್ತು ಮಂಡಳಿ ಅಧ್ಯಕ್ಷರ ನೇಮಕವಾಗಿಲ್ಲ. ಆದರೂ ಅವರ ಹೆಸರಲ್ಲಿ ಕಾರನ್ನು ಈಗ ಚೇರ್ ಮನ್ ಎಂಜಾಯ್ ಮಾಡ್ತಿರುತ್ತಾನೆ, ಇಂಥವಕ್ಕೆ ಕಡಿವಾಣ ಹಾಕಬೇಕು ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲದ ರೀತಿ ಮಾಡಬೇಕು. ಈಗ ಸರ್ಕಾರದಲ್ಲಿ ಹೆಚ್ಚು ಭ್ರಷ್ಟಾಚಾರ ಇದೆ ಎಂದು ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next